Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಜೆಡಿಎಸ್ ಗೆ ಮತ ಕೊಟ್ಟರೆ ಬಿಜೆಪಿಗೆ ಮತ ಕೊಟ್ಟಂತೆ- ಸಚಿವ ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಜೆಡಿಎಸ್ ಗೆ ಮತ ಕೊಟ್ಟರೆ ಬಿಜೆಪಿಗೆ ಮತ ಕೊಟ್ಟಂತೆ- ಸಚಿವ ಡಿ.ಕೆ ಶಿವಕುಮಾರ್
ನಾಗಮಂಗಲ , ಶನಿವಾರ, 21 ಏಪ್ರಿಲ್ 2018 (18:34 IST)
ನಾಗಮಂಗಲ : ದೇವೇಗೌಡರು ಪ್ರಧಾನಿಯಾಗಿದ್ದಾರೆ. ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರವಿದ್ದಾಗ ಇವರು ರಾಷ್ಟ್ರ ಮತ್ತು ರಾಜ್ಯಕ್ಕೆ ಮಾಡಿದ ಕೊಡುಗೆ ಏನು? ಯಾವ ಮಾತನ್ನು ನೀವು ಉಳಿಸಿಕೊಂಡಿದ್ದೀರಿ ಎಂದು ಸಚಿವ ಡಿ.ಕೆ ಶಿವಕುಮಾರ್ ಅವರು ತಂದೆ ಮಗವ ವಿರುದ್ಧ ಹರಿಹಾಯ್ದಿದ್ದಾರೆ.


ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು,’ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಎಲ್ಲಾ ರೀತಿಯ ಸಾಲ ಮನ್ನಾ ಮಾಡುವೆ ಎಂದು ಹೇಳುವ ಕುಮಾರಸ್ವಾಮಿ, ಅಧಿಕಾರವಿದ್ದಾಗ ಬಡವರಿಗೆ ಅಕ್ಕಿ ಏಕೆ ಕೊಡಲಿಲ್ಲ. ಯುವಕರಿಗೆ ಏಕೆ ಉದ್ಯೋಗ ಸೃಷ್ಟಿಸಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲವೇಕೆ? ಚುನಾವಣೆಯಲ್ಲಿ ಜನರ ಮುಂದೆ ಮತ ಕೇಳಬೇಕಾದರೆ ಸಾಕ್ಷಿ ಗುಡ್ಡಗಳಿರಬೇಕು ಅಂತಹ ಸಾಕ್ಷಿಗಳನ್ನು ನಾವು ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.


ರಾಜ್ಯದಲ್ಲಿ ಜೆಡಿಎಸ್ ಗೆ ಮತ ಕೊಟ್ಟರೆ ಬಿಜೆಪಿಗೆ ಮತ ಕೊಟ್ಟಂತೆ, ಬಿಜೆಪಿಯಿಂದ ಭವಿಷ್ಯದಲ್ಲಿ ದೊಡ್ಡ ಅಪಾಯವಿದೆ. ಇದನ್ನು ಮತದಾರರು ಮನಗಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಸಚಿವ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ ನೀಡಲ್ಲ ಎಂದಿದ್ದಕ್ಕೆ ಏರ್ ಗನ್‌ನಿಂದ ಕೊಂದ ಬಿಜೆಪಿ ಅಧ್ಯಕ್ಷ