Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರಕಾರವಿದ್ದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳ: ಅಮಿತ್ ಶಾ

ಕಾಂಗ್ರೆಸ್ ಸರಕಾರವಿದ್ದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳ: ಅಮಿತ್ ಶಾ
ಮಂಡ್ಯ , ಶನಿವಾರ, 31 ಮಾರ್ಚ್ 2018 (15:44 IST)
ಕಾಂಗ್ರೆಸ್ ಸರಕಾರವಿದ್ದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ. ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ್ರೆ ಅಧಿಕಾರವನ್ನ ರೈತರಿಗೆ ಸಮರ್ಪಣೆ ಮಾಡ್ತೇವೆ.ರೈತ ಮಿತ್ರ ಘೋಷಣೆ ಪತ್ರ ಹೊರಡುಸ್ತೇವೆ ಎಂದು ಆಶ್ವಾಸನೆ ನೀಡಿದರು.
 
ಬಿಜೆಪಿಯ ಸರ್ಕಾರ ಇದ್ದ ಕಡೆ ರೈತರ ಆತ್ಮಹತ್ಯೆ ಕಡಿಮೆ ಆಗಿದೆ. ಕಾಂಗ್ರೆಸ್ ಸರ್ಕಾರ ಇದ್ದ ಕಡೆ ಆತ್ಮಹತ್ಯೆ ಹೆಚ್ಚಾಗಿದೆ‌ ಮಹಾರಾಷ್ಟ್ರ ದಲ್ಲಿ ಆತ್ಮಹತ್ಯೆ ಕಡಿಮೆ ಆಗಿದೆ. ಅಲ್ಲಿ ನಮ್ಮ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿದೆ.ನಿಮ್ಮ ಮುಷ್ಟಿ ಅಕ್ಕಿ ಅನ್ನದ ಋಣ ನಮ್ಮ ಮೇಲಿದೆ. ಆ ಋಣ ತೀರಿಸುತ್ತೇವೆ. ಮುಷ್ಠಿ ಧಾನ್ಯ ಕಾರ್ಯಕ್ರಮಕ್ಕೆ ಇಲ್ಲಿಗೆ ಬಂದಿದ್ದೇವೆ.
 
ರೈತರು, ಕೃಷಿ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ‌.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ರೈತರ ಸಮಸ್ಯೆ ಬಗೆ ಹರಿಸುತ್ತೇವೆ. ನಮ್ಮ ರೈತರ ಬೇಡಿಕೆಗಳನ್ನ ಈಡೇರಿಸಲು ಪ್ರಣಾಳಿಕೆ ಮೊದಲ ಪ್ರಾಶಸ್ತ್ಯ ನೀಡುತ್ತೇವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ರೆಸಾರ್ಟ್‌ನಲ್ಲಿದ್ದು ಹಣ ಹಂಚಲು ಬಂಡಲ್ ಕಟ್ತಿದ್ದಾರೆ: ಕುಮಾರಸ್ವಾಮಿ