Select Your Language

Notifications

webdunia
webdunia
webdunia
webdunia

ದೇವೇಗೌಡರು 24 ಗಂಟೆ ಕೂಡ ರಾಜಕೀಯ ಮಾಡಿಕೊಂಡು ಇರುತ್ತಾರೆ, ಜ್ಯೋತಿಷಿಗಳ ಮಾತು ಕೇಳಿ ಮಾಟ ಮಂತ್ರ ಮಾಡುತ್ತಾರೆ- ವೀರಪ್ಪ ಮೊಯಿಲಿ

ದೇವೇಗೌಡರು 24 ಗಂಟೆ ಕೂಡ ರಾಜಕೀಯ ಮಾಡಿಕೊಂಡು ಇರುತ್ತಾರೆ, ಜ್ಯೋತಿಷಿಗಳ ಮಾತು ಕೇಳಿ ಮಾಟ ಮಂತ್ರ ಮಾಡುತ್ತಾರೆ- ವೀರಪ್ಪ ಮೊಯಿಲಿ
ಚಿಕ್ಕಬಳ್ಳಾಪುರ , ಶುಕ್ರವಾರ, 4 ಮೇ 2018 (06:27 IST)
ಚಿಕ್ಕಬಳ್ಳಾಪುರ : ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ ಮಾಟ ಮಂತ್ರ ಮಾಡುತ್ತಾರೆ. ತಾಯತ ಕಟ್ಟಿಕೊಳ್ಳುತ್ತಾರೆ ಎಂದು  ಸಂಸದ ವೀರಪ್ಪ ಮೊಯಿಲಿ ಅವರು ಹೇಳಿದ್ದಾರೆ.


ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,’ ದೇವೇಗೌಡರು 24 ಗಂಟೆ ಕೂಡ ರಾಜಕೀಯ ಮಾಡಿಕೊಂಡು ಇರುತ್ತಾರೆ, ಜ್ಯೋತಿಷಿಗಳ ಮಾತು ಕೇಳಿ ಮಾಟ ಮಂತ್ರ ಮಾಡುತ್ತಾರೆ. ತಾಯತ ಕಟ್ಟಿಕೊಳ್ಳುತ್ತಾರೆ. ಜ್ಯೋತಿಷಿಯನ್ನೇ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದ್ದಾರೆ. ಅವರು ಪುಸ್ತಕಗಳನನ್ನು ಓದೋಲ್ಲ . ಅವರು ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಂಡರೆ ಸಂಸ್ಕಾರ ಕಲಿತು ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.


ಹಾಗೇ ದೇವೇಗೌಡರು ಇದೀಗ ಬಿಜೆಪಿ ಜೊತೆ ಕೈಜೋಡಿಸಿದರೆ ಕುಮಾರಸ್ವಾಮಿ ಅವರನ್ನು ಮನೆಯಿಂದ ಆಚೆ ಹಾಕುತ್ತೇನೆ ಎಂದಿದ್ದಾರೆ. ಅವರು ಹೇಳಿಕೆ ಕೊಡುವುದರಲ್ಲಿ ಪ್ರಚಂಡರು. ಇಂತಹ ವರ್ತನೆಗಳಿಂದಲೇ ಅವರು ಪ್ರಧಾನಿಯಾಗಿ ಬಹಳ ಕಾಲ ಉಳಿಯಲಿಲ್ಲ ಎಂದು ಅವರು ಟೀಕೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವೆ. ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ - ಸಿಎಂ ಇಬ್ರಾಹಿಂ