Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಫುಲ್ ಗರಂ ಆದ ನಟ ಹುಚ್ಚ ವೆಂಕಟ್

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಫುಲ್ ಗರಂ ಆದ ನಟ ಹುಚ್ಚ ವೆಂಕಟ್
ಬೆಂಗಳೂರು , ಗುರುವಾರ, 31 ಮೇ 2018 (06:31 IST)
ಬೆಂಗಳೂರು : ‘ರೈತರ ಸಾಲಮನ್ನಾ ಕುರಿತು ಸಿಎಂ ಜೊತೆ ಮಾತನಾಡಲು ಬಂದ್ರೆ ನನಗೆ ಅನುಮತಿ ನೀಡುತ್ತಿಲ್ಲ. ಹೀಗಾದರೆ ಇನ್ನು ಜನಸಾಮನ್ಯರ ಕಷ್ಟಗಳನ್ನು ಸಿಎಂ ಹೇಗೆ ಬಗೆಹರಿಸುತ್ತಾರೆ’ ಎಂದು ನಟ ಹುಚ್ಚ ವೆಂಕಟ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಪುಲ್ ಗರಂ ಆಗಿದ್ದಾರೆ.


‘ಚುನಾವಣಾ ಪ್ರಚಾರದಲ್ಲಿ ನಾನು ರೈತರ ಸಾಲಮನ್ನಾ ಮಾಡ್ತೀನಿ ಅಂತಾ ಹೇಳಿಕೊಂಡು ಬಂದವರು ಇಂದು ಸಿಎಂ ಸ್ಥಾನದಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಅಂತಾ ಸಬೂಬು ಹೇಳುವ ಮೂಲಕ ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯಬಾರದು. ನಾನು ಕೂಡ ರೈತನ ಮಗ. ಕರ್ನಾಟಕದ ಪ್ರಜೆಯಾಗಿ ಸಿಎಂ ಜೊತೆ ಚರ್ಚಿಸುವ ಹಕ್ಕು ನನಗಿದೆ. ಸ್ಟಾರ್ ಹುಚ್ಚ ವೆಂಕಟ್‍ಗೆ ಸಿಎಂ ಜೊತೆ ಮಾತನಾಡಲು ಅವರ ಪಿಎ ಅನುಮತಿ ನೀಡ್ತಿಲ್ಲ. ನನ್ನ ಎಕ್ಕಡ ಇನ್ಮುಂದೆ ನಾನು ಇಲ್ಲಿಗೆ ಬರೋದಿಲ್ಲ ಎಂದು ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಅನಗತ್ಯ ಒತ್ತಡವನ್ನು ತಪ್ಪಿಸಲು ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಹೊರಡಿಸಿದ ಹೊಸ ಆದೇಶ ಹೀಗಿದೆ!