Select Your Language

Notifications

webdunia
webdunia
webdunia
webdunia

ಅನುಚಿತವಾಗಿ ವರ್ತಿಸಿದವನಿಗೆ ಕರಾಟೆಯ ಮೂಲಕ ಪಂಚ್ ನೀಡಿದ ಯುವತಿ

ಅನುಚಿತವಾಗಿ ವರ್ತಿಸಿದವನಿಗೆ ಕರಾಟೆಯ ಮೂಲಕ ಪಂಚ್ ನೀಡಿದ ಯುವತಿ
ಬೆಂಗಳೂರು , ಭಾನುವಾರ, 2 ಸೆಪ್ಟಂಬರ್ 2018 (06:43 IST)
ಬೆಂಗಳೂರು : ಅಂದು ಶಾಲೆಯಲ್ಲಿ ಕಲಿತ ಕರಾಟೆಯಿಂದ  ಯುವತಿಯೊಬ್ಬಳು ತನ್ನ ಮಾನವನ್ನು ಕಾಪಾಡಿಕೊಂಡು ಸೇಫ್ ಆಗಿ ಮನೆ ಸೇರಿದ ಘಟನೆ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಯುವತಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದು, ತನ್ನ ಸಹೋದ್ಯೋಗಿ ರಾಹುಲ್ ಸಿಂಗ್ ಎಂಬುವವನ ಜೊತೆ ಊಟಕ್ಕೆ ಹೊರಗೆ ಹೋಗಿದ್ದಳು. ಈ ವೇಳೆ ಯುವತಿಯ ಜೊತೆ ಆತ ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದನು. ಆಗ ಯುವತಿ ತಾನು ಶಾಲೆಯಲ್ಲಿ ಕಲಿತ್ತಿದ್ದ ಕರಾಟೆಯಿಂದ ಆತನ ಮೇಲೆ ಪ್ರಯೋಗಿಸಿ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗಿ ಸೇಫ್ ಆಗಿ ಮನೆ ಸೇರಿದ್ದಾಳೆ.


ನಂತರ ಆಕೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ, ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಈ ಕುರಿತು ಈಗಾಗಲೇ ತನಿಖೆ ಕೂಡ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಯ ಆವರಣದಲ್ಲೆ ವಿದ್ಯಾರ್ಥಿನಿಯ ಸ್ಕರ್ಟ್‍ನಲ್ಲಿ ಕೈ ಹಾಕಿ ಪರಾರಿಯಾದ ಕಾಮುಕ