Select Your Language

Notifications

webdunia
webdunia
webdunia
webdunia

ಕುಟುಂಬ ಅವಾರ್ಡ್ಸ್ ನಲ್ಲಿ ‘ಗಟ್ಟಿಮೇಳ’ ಕಾಣಿಸಿಕೊಳ್ಳಲಿಲ್ಲ ಯಾಕೆ? ಹೀರೋ ಇಲ್ಲದೇ ಮುಗಿಯುತ್ತಾ ಧಾರವಾಹಿ?

ಕುಟುಂಬ ಅವಾರ್ಡ್ಸ್ ನಲ್ಲಿ ‘ಗಟ್ಟಿಮೇಳ’ ಕಾಣಿಸಿಕೊಳ್ಳಲಿಲ್ಲ ಯಾಕೆ? ಹೀರೋ ಇಲ್ಲದೇ ಮುಗಿಯುತ್ತಾ ಧಾರವಾಹಿ?
ಬೆಂಗಳೂರು , ಶನಿವಾರ, 11 ನವೆಂಬರ್ 2023 (09:09 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಗಟ್ಟಿಮೇಳ ಇನ್ನೇನು ಕೆಲವೇ ಎಪಿಸೋಡ್ ಗಳು ಮಾತ್ರ ಪ್ರಸಾರವಾಗಲಿದೆ ಎಂದು ಕೆಲವು ದಿನಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ.

ಹಾಗಿದ್ದರೂ ಧಾರವಾಹಿ ಇನ್ನೂ ಮುಕ್ತಾಯ ಕಂಡಿಲ್ಲ. ಇದಕ್ಕೆ ಕಾರಣ ಜೀ ವಾಹಿನಿ ಅದೇ ಸ್ಲಾಟ್ ಗೆ ಇನ್ನೊಂದು ಧಾರವಾಹಿ ನಿರ್ಮಾಣ ಮಾಡುತ್ತಿದ್ದು, ಅದಿನ್ನೂ ಸರಿಯಾಗಿ ಟೇಕ್ ಆಫ್‍ ಆಗಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಡಿಸೆಂಬರ್ ಎರಡನೇ ವಾರದವರೆಗೂ ಗಟ್ಟಿಮೇಳ ಧಾರವಾಹಿ ಮುಂದುವರಿಯುವ ಸಾಧ‍್ಯತೆಯಿದೆ ಎಂಬ ಮಾಹಿತಿ ಸಿಕ್ಕಿದೆ.

ಕೆಲವು ಕಂತುಗಳಿಂದ ನಾಯಕ ವೇದಾಂತ್ ಇಲ್ಲದೇ ಧಾರವಾಹಿ ಮುಂದುವರಿಯುತ್ತಿದೆ. ಹಾಗಿದ್ದರೂ ಈ ಧಾರವಾಹಿ ಟಿಆರ್ ಪಿ ಲಿಸ್ಟ್ ನಲ್ಲಿ ಎರಡನೇ ಸ್ಥಾನದಲ್ಲಿರುವುದು ಅದರ ಫ್ಯಾನ್ಸ್ ಫಾಲೋವರ್ಸ್ ಗೆ ಸಾಕ್ಷಿ. ಸದ್ಯಕ್ಕೆ ಸಿನಿಮಾದಲ್ಲಿ ಬ್ಯುಸಿಯಿರುವ ನಾಯಕ ವೇದಾಂತ್ ಅಲಿಯಾಸ್ ನಟ ರಕ್ಷ್ ಕೊನೆಯ ಎಪಿಸೋಡ್ ಗಳಿಗೆ ಮತ್ತೆ ಕಮ್ ಬ್ಯಾಕ್ ಮಾಡಲೂಬಹುದು. ಆದರೆ ಸದ್ಯಕ್ಕೆ ಆ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

ಆದರೆ ಈ ಬಾರಿ ಜೀ ಕುಟುಂಬ ಅವಾರ್ಡ್ಸ್ ನಲ್ಲೂ ಗಟ್ಟಿಮೇಳ ತಂಡ ಕಾಣಿಸಿಕೊಂಡಿದ್ದೇ ಕಡಿಮೆ. ಅಷ್ಟೊಂದು ಜನಪ್ರಿಯತೆ ಇದ್ದೂ ಕೇವಲ ಮೂರು ಅವಾರ್ಡ್ ನೀಡಲಾಗಿದೆ. ಸ್ಲಾಟ್ ವಿಚಾರವಾಗಿ ಧಾರವಾಹಿ ತಂಡ ಮತ್ತು ವಾಹಿನಿ ನಡುವೆ ನಡೆಯುತ್ತಿರುವ ತಿಕ್ಕಾಟವೇ ಇದಕ್ಕೆ ಒಂದು ಕಾರಣ ಎಂಬ ಮಾತು ಒಂದೆಡೆ ಕೇಳಿಬರುತ್ತಿದ್ದರೆ, ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗುತ್ತಿರುವ ಧಾರವಾಹಿ ಎಂಬುದು ಎರಡನೇ ಕಾರಣ ಎಂದು ಧಾರವಾಹಿ ತಂಡದ ಮೂಲಗಳಿಂದಲೇ ತಿಳಿದುಬಂದಿದೆ. ಏನೇ ಇದ್ದರೂ ಫ್ಯಾನ್ಸ್ ಮಾತ್ರ ತಮ್ಮ ನೆಚ್ಚಿನ ಧಾರವಾಹಿಗೆ ಸಿಗಬೇಕಾದ ಮನ್ನಣೆ ಸಿಗಬೇಕು ಎಂದು ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹೇಶ್ ಬಾಬು ಜೊತೆ ಶ್ರೀಲೀಲಾ ಡ್ಯಾನ್ಸ್