Select Your Language

Notifications

webdunia
webdunia
webdunia
webdunia

‘ಜನ ಈಗ ಏನಿದ್ದರೂ ರಾಹುಲ್ ಗಾಂಧಿ ಮಾತೇ ಕೇಳೋದು’

‘ಜನ ಈಗ ಏನಿದ್ದರೂ ರಾಹುಲ್ ಗಾಂಧಿ ಮಾತೇ ಕೇಳೋದು’
ಮುಂಬೈ , ಮಂಗಳವಾರ, 31 ಅಕ್ಟೋಬರ್ 2017 (09:49 IST)
ಮುಂಬೈ: ಮತ್ತೊಮ್ಮೆ ಶಿವಸೇನೆ ಬಿಜೆಪಿ ವಿರುದ್ಧ ಗುಟುರು ಹಾಕಿದೆ. ಬಿಜೆಪಿ ತನ್ನ ಪ್ರಥಮ ಶತ್ರು ಎಂದಿರುವ ಶಿವಸೇನೆ, ರಾಹುಲ್ ಗಾಂಧಿಯನ್ನು ಹೊಗಳಿ ಅಟ್ಟಕ್ಕೇರಿಸಿದೆ.

 
ಶಿವಸೇನೆ ಸಂಸದ ಸಂಜಯ್ ರಾವತ್ ತಮ್ಮ ಮಿತ್ರ ಪಕ್ಷ ಬಿಜೆಪಿಯನ್ನೇ ಪ್ರಮುಖ ಶತ್ರು ಎಂದು ಕರೆದಿದ್ದಾರೆ. ಅಲ್ಲದೆ, ಮಹಾರಾಷ್ಟ್ರ ಸರ್ಕಾರದಲ್ಲಿ ನಾಮಕಾವಸ್ಥೆ ಜತೆಗಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮೋದಿ ಜನಪ್ರಿಯತೆ ಕುಂದುತ್ತಿದೆ. ರಾಹುಲ್ ಶೈನ್ ಆಗುತ್ತಿದ್ದಾರೆ ಎಂದು ಶಿವಸೇನೆ ಹೇಳಿತ್ತು.

ಅದರ ಬೆನ್ನಲ್ಲೇ ಮತ್ತೊಮ್ಮೆ ಕಾಂಗ್ರೆಸ್ ಉಪಾಧ್ಯಕ್ಷರ ಗುಣಗಾನ ಮಾಡಿರುವ ಸಂಜಯ್ ರಾವತ್ ‘ಕಳೆದ ಮೂರು ವರ್ಷಗಳಲ್ಲಿ ರಾಹುಲ್ ಗಾಂಧಿ ಗಮನಾರ್ಹವಾಗಿ ಬದಲಾಗಿದ್ದಾರೆ. ಜನ ಈಗ ಅವರ ಮಾತನ್ನೇ ಕೇಳುತ್ತಿದ್ದಾರೆ’ ಎಂದು ಹೊಗಳಿದ್ದಾರೆ. ಪಕ್ಕಾ ಹಿಂದುತ್ವ ಸಿದ್ಧಾಂತ ಪರಿಪಾಲಕರಾಗಿರುವ ಶಿವಸೇನೆ ನಾಯಕರು ಕಾಂಗ್ರೆಸ್ ಗೆ ಈ ರೀತಿ ಮಣೆ ಹಾಕುತ್ತಿರುವುದು ಅಚ್ಚರಿ ಮೂಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದು-ಪಿಎಂ ಮೋದಿ ಟ್ವಿಟರ್ ನಲ್ಲಿ ಕೋಳಿ ಜಗಳ