ನೀತಿ ಸಂಹಿತೆ ಉಲ್ಲಂಘಿಸಿದ ರಾಮದೇವ ಬಾಬಾ
ಫತೆಹಪುರ , ಭಾನುವಾರ, 20 ಏಪ್ರಿಲ್ 2014 (11:07 IST)
ಯೋಗ ಗುರು ರಾಮದೇವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆಯ ಕೇಸು ದಾಖಲಾಗಿದೆ. ಉತ್ತರ ಪ್ರದೇಶದ ಫರೆಹಪುರದಲ್ಲಿ ಚುನಾವಣಾ ಆಯೋಗದದ ಅನುಮತಿ ಪಡೆಯದೇನೆ ಸಂವಾದ ಕಾರ್ಯಕ್ರವೊಂದರಲ್ಲಿ ಭಾಗವಹಿಸಿದಿ ಕಾರಣ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂಬ ಕಾರಣಕ್ಕೆ ಬಾಬಾ ರಾಮದೇವರ ವಿರುದ್ದ ಕೇಸು ದಾಖಲಾಗಿದೆ. ಯೋಗ ದಿಕ್ಷಾ ರಾಷ್ಟ್ರ ನಿರ್ಮಾಣದ ಸಭೇಯಲ್ಲಿ ಸ್ಥಲಿಯ ಅಭ್ಯರ್ಥಿಯ ಪರ ಮಾತನಾಡಿದ್ದಾರೆ. ಈ ರೀತಿ ಮಾತನಾಡುವುದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ಉಪಜಿಲ್ಲಾಧಿಕಾರಿ ವಿವೆಕ ಶ್ರೀವಾತ್ಸವ ತಿಳಿಸಿದ್ದಾರೆ. ಈ ಸಂವಾದ ಕಾರ್ಯಕ್ರಮ ನಡೆಸುವ ಸಲುವಾಗಿ ಯಾವುದೇ ರೀತಿಯ ಅನುಮತಿ ಪಡೆದಿಲ್ಲ ಎಂದು ಉಪ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ವಿಷಯದ ಕಾರಣದಿಂದಾದಗಿ 144 ಸೆಕ್ಸನ್ ಜಾರಿಗೆ ಬಂದ ಕಾರಣ ರಾಮ ದೇವರ ಅನುಯಾಯಿಗಳ ವಿರುದ್ದ ನೀತಿಸ ಸಂಹಿತೆ ಉಲ್ಲಂಘನೆ ಕೇಸು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.