Select Your Language

Notifications

webdunia
webdunia
webdunia
webdunia

‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಮತ್ತಷ್ಟು ಸಂಕಟ

‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಮತ್ತಷ್ಟು ಸಂಕಟ
ನವದೆಹಲಿ , ಶನಿವಾರ, 14 ಜುಲೈ 2018 (10:28 IST)
ನವದೆಹಲಿ: ಬಿಜೆಪಿ 2019 ರ ಲೋಕಸಭೆ ಚುನಾವಣೆ ಗೆದ್ದರೆ ಭಾರತವನ್ನು ಹಿಂದೂ ಪಾಕಿಸ್ತಾನ ಮಾಡಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ತರೂರ್ ಗೆ ಎಚ್ಚರಿಕೆ ನೀಡಿತ್ತು. ಅತ್ತ ಬಿಜೆಪಿ ರಾಹುಲ್ ಗಾಂಧಿ, ತರೂರ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿತ್ತು. ಆದರೆ ಇದೆಲ್ಲದಕ್ಕೂ ತರೂರ್ ಕ್ಯಾರೇ ಎಂದಿಲ್ಲ.

ಆದರೆ ಇದೀಗ ಇಂತಹ ಹೇಳಿಕೆ ನೀಡಿದ್ದ ತರೂರ್ ವಿರುದ್ಧ ಕೋಲ್ಕೊತ್ತಾದ ವಕೀಲರೊಬ್ಬರು ದೇಶದ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತರೂರ್ ವಿರುದ್ಧ ಸಮನ್ಸ್ ಜಾರಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತರೂರ್ ಆಗಸ್ಟ್ 14 ರೊಳಗಾಗಿ ನ್ಯಾಯಾಲಯದ ಮುಂದೆ ಹಾಜರಿರಾಗಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಮಧ್ಯಮ ವರ್ಗಕ್ಕೆ ಎಲ್ಲವೂ ತುಟ್ಟಿ!