Select Your Language

Notifications

webdunia
webdunia
webdunia
webdunia

ಮೋದಿ ಹತ್ಯೆಗೆ ಆರೆಸ್ಸೆಸ್ -ನಿತಿನ್ ಗಡ್ಕರಿ ಸಂಚು ನಡೆಸಿದ್ದಾರೆ. ಹೀಗೆ ಹೇಳಿದ್ದು ಯಾರು ಗೊತ್ತಾ?

ಮೋದಿ ಹತ್ಯೆಗೆ ಆರೆಸ್ಸೆಸ್ -ನಿತಿನ್ ಗಡ್ಕರಿ ಸಂಚು ನಡೆಸಿದ್ದಾರೆ. ಹೀಗೆ ಹೇಳಿದ್ದು ಯಾರು ಗೊತ್ತಾ?
ನವದೆಹಲಿ , ಸೋಮವಾರ, 11 ಜೂನ್ 2018 (13:18 IST)
ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಮಾವೋವಾದಿಗಳು ಸಂಚು ರೂಪಿಸಿದ ಕುರಿತು ಸ್ಫೋಟಕ ಮಾಹಿತಿ ಲಭಿಸಿರುವ ಹಿನ್ನಲೆಯಲ್ಲಿ ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕಿ ಶೆಹ್ಲಾ ರಶೀದ್ ಅವರು ಮೋದಿ ಹತ್ಯೆಗೈಯಲು ಆರೆಸ್ಸೆಸ್ ಹಾಗು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಚು ನಡೆಸಿದಂತೆ ಕಾಣುತ್ತಿದೆ ಎಂದು ಟ್ವೀಟ್ ಮಾಡಿದ್ದು ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ.


ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕಿ ಶೆಹ್ಲಾ ರಶೀದ್ ಅವರು,’ ಆರೆಸ್ಸೆಸ್- ಗಡ್ಕರಿ ಪ್ರಧಾನಿ ಮೋದಿಯನ್ನು ಕೊಲ್ಲಲು ಸಂಚು ರೂಪಿಸುತ್ತಿರುವಂತೆ ಕಾಣುತ್ತಿದೆ. ನಂತರ ಈ ಹೊಣೆಯನ್ನು ಮುಸ್ಲಿಮರು/ಕಮ್ಯುನಿಸ್ಟ್ ಗಳ ಮೇಲೆ ಹೊರಿಸುತ್ತಾರೆ. ಆನಂತರ ಮುಸ್ಲಿಮರನ್ನು ಕೊಲ್ಲುತ್ತಾರೆ. ರಾಜೀವ್ ಗಾಂಧಿ ಮಾದರಿ’ ಎಂದು ಟ್ವೀಟ್ ಮಾಡಿದ್ದರು.


ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ‘ವಿಲಕ್ಷಣ ಕಾಮೆಂಟ್ ಗಳನ್ನು ಮಾಡಿರುವ ಸಮಾಜವಿರೋಧಿಗಳ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡಿದ ಶಶಿಕಲಾ ಸೋದರ ಸಂಬಂಧಿ ವಿ. ದಿವಾಕರನ್