Select Your Language

Notifications

webdunia
webdunia
webdunia
webdunia

ಪಾಪ ದೆಹಲಿ ಜನರ ಅವಸ್ಥೆ ಎಂದು ರಾಹುಲ್ ಗಾಂಧಿ ಅನುಕಂಪ ತೋರಿದ್ದೇಕೆ?!

ಪಾಪ ದೆಹಲಿ ಜನರ ಅವಸ್ಥೆ ಎಂದು ರಾಹುಲ್ ಗಾಂಧಿ ಅನುಕಂಪ ತೋರಿದ್ದೇಕೆ?!
ನವದೆಹಲಿ , ಮಂಗಳವಾರ, 19 ಜೂನ್ 2018 (09:18 IST)
ನವದೆಹಲಿ: ದೆಹಲಿಯ ರಾಜಕೀಯ ಮೇಲಾಟದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ದೆಹಲಿ ಜನರ ಬಗ್ಗೆ ಅಯ್ಯೋ ಪಾಪ ಎಂದಿದ್ದಾರೆ.

ಸಿಎಂ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ನಿವಾಸದಲ್ಲಿ ಕಳೆದ ಒಂದು ವಾರದಿಂದ ಧರಣಿ ನಡೆಸುತ್ತಿದ್ದಾರೆ. ಇಲ್ಲಿನ ಐಎಎಸ್ ಅಧಿಕಾರಿಗಳು ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಾಹುಲ್ ಟ್ವೀಟ್ ಮಾಡಿದ್ದಾರೆ.

‘ದೆಹಲಿ ಸಿಎಂ ಎಲ್ ಜಿ ಕಚೇರಿಯಲ್ಲಿ ಧರಣಿ ಮಾಡುತ್ತಿದ್ದಾರೆ. ಬಿಜೆಪಿ ಮುಖ್ಯಮಂತ್ರಿಗಳ ಮನೆಯನಲ್ಲಿ ಧರಣಿ ನಡೆಸುತ್ತಿದೆ. ದೆಹಲಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವುದರಲ್ಲಿ ಬ್ಯುಸಿ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪ್ರಧಾನಿ ಕುರುಡರಂತೆ ನಟಿಸುತ್ತಿದ್ದಾರೆ. ಇವೆಲ್ಲದರ ನಡುವೆ ಬವಣೆ ಅನುಭವಿಸುತ್ತಿರುವವರು ದೆಹಲಿಯ ಶ್ರೀಸಾಮಾನ್ಯ’ ಎಂದು ರಾಹುಲ್ ದೆಹಲಿ ರಾಜಕೀಯ ವಿದ್ಯಮಾನದ ಕುರಿತು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತ ಎಚ್ ಕೆ ಪಾಟೀಲ್ ರನ್ನು ರಾಹುಲ್ ಬಳಿ ಕರೆದೊಯ್ದ ಕೆಸಿ ವೇಣುಗೋಪಾಲ್