Select Your Language

Notifications

webdunia
webdunia
webdunia
webdunia

ರಾಮಲಲ್ಲಾನನ್ನು ನೋಡಲು ಬರುವಾಗ ಪ್ರಧಾನಿ ಮೋದಿ ತಂದ ಉಡುಗೊರೆ ಏನು ಗೊತ್ತಾ?

Narendra Modi

Krishnaveni K

ಅಯೋಧ್ಯೆ , ಸೋಮವಾರ, 22 ಜನವರಿ 2024 (12:56 IST)
ಅಯೋಧ್ಯೆ: ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿಸಿದ ಪ್ರಧಾನಿ ಮೋದಿ ರಾಮಲಲ್ಲಾನಿಗೆ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.

ದೇವರನ್ನು ನೋಡಲು ಬರುವಾಗ ಬರಿಗೈಯಲ್ಲಿ ಬರಬಾರದು ಎಂಬ ನಿಯಮವಿದೆ. ಅದೇ ರೀತಿ ಪ್ರಧಾನಿ ಮೋದಿ ರಾಮಲಲ್ಲಾನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ರಾಮಮಂದಿರವನ್ನು ಪ್ರವೇಶ ಮಾಡುವಾಗ ಮೋದಿ ಕೈಯಲ್ಲಿ ವಸ್ತ್ರ, ಜೊತೆಗೆ ಬೆಳ್ಳಿಯ ಕಿರೀಟ  ಆಭರಣಗಳನ್ನು ಹೊತ್ತು ತಂದಿದ್ದಾರೆ. ಇದನ್ನು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಿಸಿದ ಬಳಿಕ ರಾಮಲಲ್ಲಾನ ಪಾದದ ಅಡಿಯಲ್ಲಿಟ್ಟು ಸಮರ್ಪಿಸಿದ್ದಾರೆ. ಪೂಜಾ ವಿಧಿ ವಿಧಾನದ ಬಳಿಕ ಪ್ರಧಾನಿ ಮೋದಿ ಆರತಿ ಬೆಳಗಿ ರಾಮನಿಗೆ ಮೊದಲ ಪೂಜೆ ನೆರವೇರಿಸಿದ್ದಾರೆ.

ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನಿಗೆ ಚಿನ್ನ, ವಜ್ರದ ಆಭರಣಗಳನ್ನು ತೊಡಿಸಿ ಅಲಂಕಾರ ಮಾಡಲಾಗಿದೆ. ಜೊತೆಗೆ ಹೂವಿನ ಅಲಂಕಾರಗಳೊಂದಿಗೆ ಪ್ರಭು ರಾಮ ಕಣ್ಮನ ಸೆಳೆಯುತ್ತಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಸಂಪೂರ್ಣ: ಬಾಲಕನಾಗಿ ಅಯೋಧ್ಯೆಗೆ ಮತ್ತೆ ಬಂದ ರಾಮ