Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ: ಬಾವಿಗೆ ಬಿದ್ದ ಬೆಕ್ಕು ರಕ್ಷಣೆಗೆ ಹೋದ ಐವರು ದುರ್ಮರಣ

cat

Sampriya

ಮಹಾರಾಷ್ಟ್ರ , ಬುಧವಾರ, 10 ಏಪ್ರಿಲ್ 2024 (17:15 IST)
Photo Courtesy X
ಮಹಾರಾಷ್ಟ್ರ: ಇಲ್ಲಿನ ಅಹ್ಮದ್‌ನಗರದ ವಾಡ್ಕಿ ಗ್ರಾಮದಲ್ಲಿ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಪ್ರಾಣ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ.

ಮೃತರನ್ನು ಮಾಣಿಕ್ ಗೋವಿಂದ ಕಾಳೆ (65), ಸಂದೀಪ್ ಮಾಣಿಕ್ ಕಾಳೆ (36), ಬಬ್ಲು ಅನಿಲ್ ಕಾಳೆ (28), ಅನಿಲ್ ಬಾಪುರಾವ್ ಕಾಳೆ (53) ಮತ್ತು ಬಾಬಾಸಾಹೇಬ್ ಗಾಯಕವಾಡ (36) ಎಂದು ಗುರುತಿಸಲಾಗಿದೆ.

ಅಹ್ಮದ್‌ನಗರ ಜಿಲ್ಲೆಯ ನೆವಾಸಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಧನಂಜಯ್ ಜಾಧವ್ ಅವರ ಪ್ರಕಾರ, " ಮಂಗಳವಾರ ಬಾವಿಯಲ್ಲಿ ಬೆಕ್ಕು ಬಿದ್ದ ಘಟನೆ ನಡೆದಿದೆ. ಅದನ್ನು ರಕ್ಷಿಸಲು ಹೋಗಿದ್ದವನ ರಕ್ಷಣೆಗೆ ಮತ್ತೋರ್ವ ಹೋಗಿದ್ದಾನೆ. ಈ ವೇಳೆ ಅವನೂ ಅಪಾಯಕ್ಕೆ ಒಳಗಾಗಿ ಆತನ ರಕ್ಷಣೆಗೆ ಮತ್ತೋರ್ವ ಹೋಗಿದ್ದಾನೆ. ಹೀಗೇ ಐವರು ಪ್ರಾಣ ಕಳೆದುಕೊಂಡಿದ್ದಾರೆ.

ಕೊನೆಯವ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಇಳಿದಿದ್ದರಿಂದ ಆತ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  ಗಾಯಗೊಂಡ ವ್ಯಕ್ತಿಯನ್ನು ವಿಜಯ್ ಮಾಣಿಕ್ ಕಾಳೆ (35) ಎಂದು ಗುರುತಿಸಲಾಗಿದೆ.

ಇನ್ನೂ ಬಾವಿಗೆ  ಪ್ರಾಣಿಗಳ ತ್ಯಾಜ್ಯ ಎಸೆದಿದ್ದರಿಂದ ಅದರಿಂದ ಹೊರಹೊಮ್ಮಿದ ಅನಿಲದಿಂದ ಐದು ಜನರು ಪ್ರಜ್ಞಾಹೀನರಾಗಿ ಸಾವನ್ನಪ್ಪಿದ್ದಾರೆ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳದ ಉತ್ತರಾಖಂಡ ಸರ್ಕಾರ, ಸುಪ್ರೀಂ ಆಕ್ರೋಶ