Select Your Language

Notifications

webdunia
webdunia
webdunia
webdunia

ತಾಯಿಯನ್ನು ಕಾಮುಕರಿಂದ ರಕ್ಷಿಸಲು ಹೋದ ಬಾಲಕನಿಗೆ ಆಗಿದ್ದೇನು ಗೊತ್ತಾ?

ತಾಯಿಯನ್ನು ಕಾಮುಕರಿಂದ ರಕ್ಷಿಸಲು ಹೋದ ಬಾಲಕನಿಗೆ ಆಗಿದ್ದೇನು ಗೊತ್ತಾ?
ಬಿಹಾರ , ಬುಧವಾರ, 21 ನವೆಂಬರ್ 2018 (06:51 IST)
ಬಿಹಾರ : ತಾಯಿಯನ್ನು ಕಾಮುಕರಿಂದ ರಕ್ಷಿಸಲು ಹೋಗಿ ಬಾಲಕನೊಬ್ಬ ದುಷ್ಕರ್ಮಿಗಳಿಂದ ಹತ್ಯೆಯಾದ ಘಟನೆ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ನಡೆದಿದೆ.


ಭಾನುವಾರ ರಾತ್ರಿ ಧರಮ್ ಪುರ ಗ್ರಾಮದ ನಿವಾಸಿಗಳಾಗಿದ್ದ ಬಾಲಕ ಹಾಗೂ ಅವನ ತಾಯಿ ಇಬ್ಬರು ತಮ್ಮ ಮನೆ ಬಳಿ ಇದ್ದ ರಾಜೇಂದ್ರ ಸಾ ಎಂಬುವರ ಕಿರಾಣಿ ಅಂಗಡಿಗೆ ಸಾಮಾಗ್ರಿಗಳನ್ನು ಖರೀದಿಸಲು ಹೋಗಿದ್ದರು. ಆ ವೇಳೆ ಅಂಗಡಿ ಮಾಲೀಕನ ಮಗ ಪಪ್ಪು ಹಾಗೂ ಅವನ ಸ್ನೇಹಿತರು ಸೇರಿ ಬಾಲಕನ ತಾಯಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದರು. ಆಗ ಬಾಲಕ ಅದನ್ನು ತಡೆಯಲು ಹೋದಾಗ ಪಾಪಿಗಳು ಆತನನ್ನು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ಧರಮ್ ಪುರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

2019 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಸುಷ್ಮಾ ಸ್ವರಾಜ್: ಕಾರಣವೇನು ಗೊತ್ತಾ?!