Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸಂಸದ ತರೂರ್ ಬಂಧನ

ಕಾಂಗ್ರೆಸ್ ಸಂಸದ ತರೂರ್ ಬಂಧನ
ತಿರುವನಂತಪುರಮ್ , ಶುಕ್ರವಾರ, 6 ಜನವರಿ 2017 (17:15 IST)
ನೋಟು ಅಮಾನ್ಯದ ವಿರುದ್ಧ ಕೇರಳದ ರಾಜಧಾನಿ ತಿರುವನಂತಪುರಮ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ. 
ನೋಟು ನಿಷೇಧದ ವಿರುದ್ಧದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕೈ ಜೋಡಿಸಿದ ಸಾವಿರಾರು ಕೇರಳ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ಕಚೇರಿಗಳ ಮುಂದೆ ಇಂದು ಪ್ರತಿಭಟನೆ ನಡೆಸಿದರು. ಪ್ರಮುಖ ನಾಯಕರು, ಶಾಸಕರು, ಸಂಸದರು, ಎಐಸಿಸಿ ಪ್ರತಿನಿಧಿಗಳು ಜಿಲ್ಲೆಯ ಮುಖ್ಯ ಕಚೇರಿ ಸೇರಿದಂತೆ ಕೇಂದ್ರ ಸರ್ಕಾರದಡಿಯಲ್ಲಿ ಬರುವ ಕಚೇರಿಗಳ ಮುಂದೆ ಪ್ರತಿಭಟನಾ ನಿರತರಾಗಿದ್ದರು. ಈ ಧರಣಿಯಲ್ಲಿ ತರೂರ್ ಸಹ ಪಾಲ್ಗೊಂಡಿದ್ದು, ಅವರನ್ನು ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿ ಬಿಡುಗಡೆ ಮಾಡಿದ್ದಾರೆ. 
 
ತಮ್ಮ ಬಂಧನದ ಕುರಿತು ಪ್ರತಿಕ್ರಿಯಿಸಿರುವ ತರೂರ್ ಆರ್‌ಬಿಐ ಕಚೇರಿ ಹೊರಗಡೆ ಶಾಂತಿಯುತ ಧರಣಿಯಲ್ಲಿ ನಿರತರಾಗಿದ್ದಾಗ ನಮ್ಮನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬಳಿಕ ಬಿಡುಗಡೆ ಮಾಡಿದರು ಎಂದಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಅಖಿಲೇಶ್‌ಗೆ ಪಕ್ಷದ ಸೈಕಲ್ ಚಿಹ್ನೆ ನೀಡಿ: ರಕ್ತದಲ್ಲಿ ಪತ್ರ ಬರೆದ ಬಾಲಕಿ