Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಗೆ ತಾಕತ್ತಿನ ಸವಾಲೆಸೆದ ಅಸಾವುದ್ದೀನ್ ಒವೈಸಿ

ಪ್ರಧಾನಿ ಮೋದಿಗೆ ತಾಕತ್ತಿನ ಸವಾಲೆಸೆದ ಅಸಾವುದ್ದೀನ್ ಒವೈಸಿ
ನವದೆಹಲಿ , ಶನಿವಾರ, 30 ಜೂನ್ 2018 (09:54 IST)
ನವದೆಹಲಿ: ಪ್ರಧಾನಿ ಮೋದಿ ಅಥವಾ ಕಾಂಗ್ರೆಸ್ ಗೆ ತಾಕತ್ತಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್ ನಿಂದ ಕಣಕ್ಕಿಳಿಯಲಿ ಎಂದು ಎಐಎಂಐಎಂ ಪಕ್ಷದ ಮುಖಂಡ ಅಸಾವುದ್ದೀನ್ ಒವೈಸಿ ಸವಾಲೆಸೆದಿದ್ದಾರೆ.

ಹೈದರಾಬಾದ್ ಕ್ಷೇತ್ರದ ಹಾಲಿ ಸಂಸದರಾಗಿರುವ ಒವೈಸಿ ಪ್ರಧಾನಿ ಮೋದಿ, ಅಮಿತ್ ಶಾ, ಬಿಜೆಪಿ ಅಥವಾ ಕಾಂಗ್ರೆಸ್ ನಾಯಕರು ಹೈದರಾಬಾದ್ ನಿಂದ ಕಣಕ್ಕಿಳಿದು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಮೋದಿ ನೇತೃತ್ವದ ಬಿಜೆಪಿಗೆ, ರಾಹುಲ್ ನೇತೃತ್ವದ ಕಾಂಗ್ರೆಸ್ ಗೆ ಯಾರಿಗೂ ನಮ್ಮನ್ನು ಇಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಸದಾ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರುವ ಒವೈಸಿ ಪ್ರಧಾನಿ ಮೋದಿ ಸುಳ್ಳು ಭರವಸೆಗಳನ್ನಿತ್ತು ಜನರಿಗೆ ಮಂಕುಬೂದಿ ಎರಚಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಇದು 37 ಶಾಸಕರ ಬಜೆಟ್ ಅಷ್ಟೇ: ರಾಜ್ಯ ಬಜೆಟ್ ಗೆ ಬಿಎಸ್ ವೈ ವ್ಯಂಗ್ಯ