Select Your Language

Notifications

webdunia
webdunia
webdunia
webdunia

ಹುಡುಗಿಯ ಜತೆ ಮಾತನಾಡಿ ಜೀವಕ್ಕೆ ಕುತ್ತು ತಂದುಕೊಂಡ ಹುಡುಗ!

ಹುಡುಗಿಯ ಜತೆ ಮಾತನಾಡಿ ಜೀವಕ್ಕೆ ಕುತ್ತು ತಂದುಕೊಂಡ ಹುಡುಗ!
ಕಾನ್ಪುರ , ಶನಿವಾರ, 8 ಸೆಪ್ಟಂಬರ್ 2018 (07:05 IST)

ಕಾನ್ಪುರ : ತನ್ನ ಹುಡುಗಿಯನ್ನು ಮಾತನಾಡಿಸಿದ ಎಂಬ ಕ್ಷುಲಕ ಕಾರಣಕ್ಕೆ ತನ್ನ ಸ್ನೇಹಿತನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


 

ಕೊಲೆಯಾದ ಯುವಕ 11ನೇ ತರಗತಿಯಲ್ಲಿ ಓದುತ್ತಿದ್ದು, ಇತ ತನ್ನ ನೆರೆಮನೆಯ ಹುಡುಗಿಯನ್ನು ಮಾತನಡಿಸುತ್ತಿದ್ದನಂತೆ. ಇದರಿಂದ ಕೋಪಗೊಂಡ ಆರೋಪಿ ಆಕೆಯ ಜೊತೆ ಮಾತನಾಡಬಾರದೆಂದು ಎಚ್ಚರಿಕೆ ನೀಡಿದ್ದರೂ ಕೂಡ ಆತ ಮತ್ತೆ ಮತ್ತೆ ಮಾತನಾಡಿಸುತ್ತಿದ್ದುದೇ ಈ ಕೊಲೆಗೆ ಕಾರಣವಾಯಿತು ಎನ್ನಲಾಗಿದೆ.

 

ಹುಡುಗಿ ಜತೆ ಮಾತನಾಡುತ್ತಿದ್ದ ವೇಳೆಯೇ ಹುಡುಗನ ಮೇಲೆ ಆರೋಪಿ ಹಾಗೂ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರ ಗಾಯಗಳಿಂದ ಬಳಲುತ್ತಿದ್ದ ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಆತ ಮೃತಪಟ್ಟಿದ್ದ ಎಂಬುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಚಿವಾಲಯ ಕಲಬುರ್ಗಿಗೆ ಬರಲಿ