Select Your Language

Notifications

webdunia
webdunia
webdunia
webdunia

ಉಮೇಶ ಕತ್ತಿ ಹೇಳಿಕೆ ಸರಿಯಲ್ಲ ಅಂತ ಯಡಿಯೂರಪ್ಪ ಹೇಳಿದ್ಯಾಕೆ?

ಉಮೇಶ ಕತ್ತಿ ಹೇಳಿಕೆ ಸರಿಯಲ್ಲ ಅಂತ ಯಡಿಯೂರಪ್ಪ ಹೇಳಿದ್ಯಾಕೆ?
ವಿಜಯಪುರ , ಗುರುವಾರ, 27 ಡಿಸೆಂಬರ್ 2018 (17:40 IST)
ಆಪರೇಶನ್ ಕಮಲ ಮಾಡುವುದಾಗಿ ನಾನು ಹೇಳಿಲ್ಲ. ನಮ್ಮ ನಾಯಕರೂ ಹೇಳಿಲ್ಲ. ಈ ನಿಟ್ಟಿನಲ್ಲಿ ನೀಡಿರುವ ಉಮೇಶ್ ಕತ್ತಿ‌ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಕಾಂಗ್ರೆಸ್- ಜೆಡಿಎಸ್ ಸರ್ಕಾರ ಕಚ್ಚಾಡಿಕೊಂಡು ಸರಕಾರ ಬಿದ್ದರೆ, ನಾವು ಮುಂದೆ ಯೋಚಿಸುತ್ತೇವೆ. ಯಾವುದೇ  ಕಾರಣಕ್ಕೂ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೆಳೆಯುವ ಯತ್ನ‌ ಮಾಡುವುದಿಲ್ಲ. ಪರಸ್ಥಿತಿ ಬಂದಾಗ ರಾಜಕೀಯ ಏರು ಪೇರಾದಾಗ ಕುಳಿತು ಚರ್ಚೆ ಮಾಡುತ್ತೇವೆ. ಒಂದು ವೇಳೆ ಜೆಡಿಎಸ್- ಕಾಂಗ್ರೆಸ್ ನಮ್ಮ ಬಳಿ ಬಂದರೆ?  ಎಂಬ ಪ್ರಶ್ನೆಗೆ ರೇ ಎಂಬುದಕ್ಕೆ ನಾನು ಉತ್ತರಿಸುವುದಿಲ್ಲ ಎಂದರು.

ನಾವು ರಾಜಕೀಯ ಸನ್ಯಾಸಿಗಳಲ್ಲ. ಸೂಕ್ತ ಸಮಯಕ್ಕೆ ಸೂಕ್ತ ನಿರ್ಣಯ ತೆಗೆದುಕೊಳ್ತೇವೆ. ಉಮೇಶ್ ಕತ್ತಿ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದರು.

ವಿಜಯಪುರದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮುಂಬರುವ ಲೋಕಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತೇವೆ. ಸ್ಥಳೀಯ ಮುಖಂಡರ  ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಕೇಂದ್ರದ ನಾಯಕರು ಮಾಡುತ್ತಾರೆ ಎಂದರು.  

 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಜತೆ ಕಾಂಗ್ರೆಸ್ ಲೋಕ ಮೈತ್ರಿ ನಿಶ್ಚಿತ !