Select Your Language

Notifications

webdunia
webdunia
webdunia
webdunia

ಡಿ ಬಾಸ್ ಪರ ಘೋಷಣೆ ಕೂಗಿದವರ ಕಥೆ ಏನಾಯ್ತು?

ಡಿ ಬಾಸ್ ಪರ ಘೋಷಣೆ ಕೂಗಿದವರ ಕಥೆ ಏನಾಯ್ತು?
ಮಂಡ್ಯ , ಭಾನುವಾರ, 24 ಮಾರ್ಚ್ 2019 (20:58 IST)
ನಿಖಿಲ್ ಕುಮಾರಸ್ವಾಮಿ ಚುನಾವಣಾ ಪ್ರಚಾರದ ವೇಳೆ ಕಲ್ಲು ತೂರಾಟ ಮತ್ತು ಸಭೆಯಲ್ಲಿ ಡಿ ಬಾಸ್ ಘೋಷಣೆ ಕೂಗಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡ ಕೆ ಆರ್ ಪೇಟೆ ಗ್ರಾಮಾಂತರ  ಪೊಲೀಸರು, ಎರಡೂ ಪ್ರಕರಣಗಳಿಂದ 24 ಜನರ ವಿರುದ್ದ ಎಫ್ ಐ ಆರ್ ದಾಖಲು ಮಾಡಿದ್ದಾರೆ. ಮೂವರ ಬಂಧನ ಮಾಡಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.
ಕೆ ಆರ್ ಪೇಟೆ ಶಾಸಕ ನಾರಾಯಣಗೌಡ ಕಾರು ಚಾಲಕ ಸುರೇಶ್ ರಿಂದ ದೂರು ದಾಖಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 341, 506, 324, 323, 427  ರಿತ್ಯಾ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕೆ ಆರ್ ಪೇಟೆ ತಾಲೂಕು ಸೋಮನಹಳ್ಳಿ ಬಳಿ ನಿಖಿಲ್ ರೋಡ್ ಶೋ ನಡೆಸುತ್ತಿದ್ದ ವೇಳೆ ನಿಖಿಲ್ ಬೆಂಬಲಿಗರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದಾದ ಬಳಿಕ ಅಕ್ಕಿ ಹೆಬ್ಬಾಳಿನಲ್ಲಿ ಪ್ರಚಾರ ಸಭೆ ವೇಳೆ ಡಿ ಬಾಸ್ ಎಂದು ಅಭಿಮಾನಿಗಳು ಕೂಗಾಟ ನಡೆಸಿದ್ದರಿಂದ ಎರಡೂ ಕಾರ್ಯಕರ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಡಿಡಿ ಕೈ ಬಲಪಡಿಸಲು ನಿರ್ಧಾರ