Select Your Language

Notifications

webdunia
webdunia
webdunia
webdunia

ಶವ ಸಂಸ್ಕಾರಕ್ಕೆ ಹೋದಾದ ಸ್ಮಶಾನದಲ್ಲಿ ಆಗಿದ್ದೇನು?

ಶವ ಸಂಸ್ಕಾರಕ್ಕೆ ಹೋದಾದ ಸ್ಮಶಾನದಲ್ಲಿ ಆಗಿದ್ದೇನು?
ಆನೇಕಲ್ , ಗುರುವಾರ, 14 ಫೆಬ್ರವರಿ 2019 (15:41 IST)
ವ್ಯಕ್ತಿಯೊಬ್ಬರ ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಹೋಗಿದ್ದಾಗ ಗಲಾಟೆ ನಡೆದಿದೆ.

ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಹೋದಾಗ ಅಡ್ಡಿ ಪಡಿಸಿ ಗಲಾಟೆ ನಡೆಸಲಾಗಿದೆ. ಸ್ಮಶಾನದ ಜಾಗ ಒತ್ತುವರಿವಾಗಿದೆ ಎಂಬ ಆರೋಪ ಹಿನ್ನೆಲೆ ಗಲಾಟೆ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೊಸರೋಡ್ ಸ್ಮಶಾನದಲ್ಲಿ ಘಟನೆ ನಡೆದಿದೆ. ಇಂದು ಹೊಸರೋಡ್ ನಿವಾಸಿ ಶಾಮಣ್ಣ ಮೃತಪಟ್ಟಿದ್ದರು. ಶವ ಸಂಸ್ಕಾರ ಮಾಡಲು ಹೋದಾಗ ಒತ್ತುವರಿದಾರರಿಂದ ಗಲಾಟೆ ನಡೆದಿದೆ.

ಒತ್ತುವರಿದರಾರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೊಸರೋಡ್ ನಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಹೊಸರೋಡ್ ನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಸ್ಮಶಾನದ ಬಳಿ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದರು.  



 

Share this Story:

Follow Webdunia kannada

ಮುಂದಿನ ಸುದ್ದಿ

ಅಮರ್ ಟೀಸರ್ ಬಿಡುಗಡೆ; ಅಂಬಿ ಅಭಿಮಾನಿಗಳಿಂದ ಸಂಭ್ರಮ