Select Your Language

Notifications

webdunia
webdunia
webdunia
webdunia

ಭಗವಾನ್ ಮಾತಿಗೆ ಪೇಜಾವರ ಶ್ರೀ ಹೇಳಿದ್ದೇನು?

ಭಗವಾನ್ ಮಾತಿಗೆ ಪೇಜಾವರ ಶ್ರೀ ಹೇಳಿದ್ದೇನು?
ಉಡುಪಿ , ಶುಕ್ರವಾರ, 28 ಡಿಸೆಂಬರ್ 2018 (19:25 IST)
ಶ್ರೀರಾಮನು ಶೂದ್ರನಾಗಿದ್ದನು ಎಂದು ಹೇಳಿಕೆ ಕೊಟ್ಟಿರುವ ಭಗವಾನ್ ಹೇಳಿಕೆಗೆ ಪೇಜಾವರ ಮಠದ ಶ್ರೀಗಳು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.  

ಪ್ರೊ. ಭಗವಾನ್ ಅವರು ಹಿಂದೂ ಧರ್ಮದ ಮೇಲೆ ದ್ವೇಷ ಇಟ್ಟಿದ್ದಾರೆ. ಹೀಗಾಗಿ ಅವರ ಮಾತಿಗೆ ಯಾವುದೇ ಬೆಲೆಕೊಡಬೇಕಾದ ಅಗತ್ಯವಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ. ಶ್ರೀರಾಮನ ಬಗ್ಗೆ ಪ್ರೊ.ಭಗವಾನ್ ಅವರು ಅವಮಾನಕಾರಿ ಬರೆದಿದ್ದಾರೆಂಬ ವಿವಾದ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರೊ.ಭಗವಾನ್ಗೆ ತಿರುಗೇಟು ನೀಡಿದ್ದಾರೆ.

ಶ್ರೀರಾಮ ಕ್ಷತ್ರೀಯ ಕುಲಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ಆತ ಮಾಂಸಾಹಾರ ಸೇವನೆ ಮಾಡಿದ್ದರೆ ಅದರಲ್ಲಿ ಆಶ್ಚರ್ಯ ಇಲ್ಲ. ಮೇರೇಯ ಅಂದರೆ ಅದು ಮದ್ಯ ಅಲ್ಲ, ಅದೊಂದು ಪಾನೀಯ. ಏಸು ಕ್ರಿಸ್ತ, ಪೈಗಂಬರ್ ಮಾಂಸ ತಿಂದು ದೇವರಾಗಿಲ್ಲವೇ? ಕೇವಲ ರಾಮನ ಬಗ್ಗೆ ಮಾತ್ರ ಏಕೆ ಮಾತನಾಡುತ್ತೀರಿ ಎಂದು ಪೇಜಾವರಶ್ರೀ ಪ್ರೊ.ಭಗವಾನ್ ಅವರನ್ನು ಪ್ರಶ್ನಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೈ ನಾಯಕರ ಬಗ್ಗೆ ಅಸಮಧಾನ ಇಲ್ಲ ಎಂದ ಸಿಎಂ