Select Your Language

Notifications

webdunia
webdunia
webdunia
webdunia

ಅಕ್ಕನ ಜೊತೆ ಜಗಳವಾಡಿದ್ದಕ್ಕೆ ಭಾವನಿಗೆ ಭಾಮೈದ ಮಾಡಿದ್ದೇನು ಗೊತ್ತಾ?

ಅಕ್ಕನ ಜೊತೆ ಜಗಳವಾಡಿದ್ದಕ್ಕೆ ಭಾವನಿಗೆ ಭಾಮೈದ ಮಾಡಿದ್ದೇನು ಗೊತ್ತಾ?
ಬೆಂಗಳೂರು , ಬುಧವಾರ, 30 ಜನವರಿ 2019 (11:13 IST)
ಬೆಂಗಳೂರು : ಅಕ್ಕನ ಜೊತೆ ಜಗಳವಾಡಿದ್ದಕ್ಕೆ ಬಾಮೈದನೊಬ್ಬ ತನ್ನ ಬಾವನ ಕೈ ಬೆರಳು ಕಟ್ ಮಾಡಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ.


ಅಮ್ಜದ್ ಈ ಕೃತ್ಯ ಎಸಗಿದ ಆರೋಪಿ, ಶಫೀ ಹಲ್ಲೆಗೊಳಗಾದ ಭಾವ. ಕಾರ್ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಶಫೀ ಕಳೆದೊಂದು ವಾರದಿಂದ ಹೊಟ್ಟೆ ನೋವಿನಿಂದ ಕೆಲಸಕ್ಕೆ ತೆರಳದೇ ಮನೆಯಲ್ಲಿದ್ದರೂ ಕೂಡ ಆತನ ಪತ್ನಿ ನೀಲೂಫರ್ ತನ್ನ ಪತಿಯ ಆರೋಗ್ಯವನ್ನು ವಿಚಾರಿಸಲಿಲ್ಲ. ಈ ಬಗ್ಗೆ ಶಫೀ ತನ್ನ ಪತ್ನಿಯನ್ನು ಪ್ರಶ್ನಿಸಿದ್ದಕ್ಕೆ ದಂಪತಿಗಳ ನಡುವೆ ಜಗಳ ನಡೆದಿದೆ.  


ಜಗಳವಾದ ಬಳಿಕ ಸಂಜೆ ನೀಲೂಫರ್ ಸಹೋದರ ಅಶೂ ತನ್ನ ಮಾವಂದಿರ ಜೊತೆ ಬಂದು ಶಫೀಯ ಎದೆ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಬಲಗೈನ ಕೈ ಬೆರಳುಗಳನ್ನ ಕಟ್ ಮಾಡಿ ಹಲ್ಲೆ ನಡೆಸಿದ್ದಾರೆ. ಗಾಯಾಳು ಶಫೀಯನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟ ದೇವೇಗೌಡರಿಗೆ ಕಾಂಗ್ರೆಸಿಗರಿಂದ ಎದುರಾಗಿದೆ ಸಂಕಷ್ಟ