Select Your Language

Notifications

webdunia
webdunia
webdunia
webdunia

ಮುನಿಸು ಮಣಿಸಲು ಮುಂದಾದ ವಿಜಯೇಂದ್ರ: ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದ ಸುಮಲತಾ ‌

ಮುನಿಸು ಮಣಿಸಲು ಮುಂದಾದ ವಿಜಯೇಂದ್ರ: ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದ ಸುಮಲತಾ ‌

Sampriya

ಬೆಂಗಳೂರು , ಶುಕ್ರವಾರ, 29 ಮಾರ್ಚ್ 2024 (18:37 IST)
Photo Courtesy X
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭೇಟಿಯಾದರು.

ವಿಜಯೇಂದ್ರ ಅವರು ಈ ವೇಳೆ ಮಂಡ್ಯದ ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ಕೋರಿದರು.  ಇಂದು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸಂಸದೆ ಸುಮಲತಾ ಮನೆಯಲ್ಲಿ ವಿಜಯೇಂದ್ರ ಅವರು ಮಾತುಕತೆ ನಡೆಸಿದರು.  ಈ ವೇಳೆ ಲೋಕಸಭೆ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಸುಮಲತಾ ಅವರ ಮುನಿಸನ್ನು ಮಣಿಸಲು ವಿಜಯೇಂದ್ರ ಮುಂದಾದರು.

ವಿಜಯೇಂದ್ರ ಭೇಟಿ ಬಳಿಕ ಮಾತನಾಡಿದ ಸುಮಲತಾ ಅವರು, ಮಂಡ್ಯ ಬಿಟ್ಟು ಎಲ್ಲೋ ನಾನು ಸ್ಪರ್ಧೆ ಮಾಡುವುದಿಲ್ಲ. ನನ್ನ ಅಸ್ತಿತ್ವನೇ ಮಂಡ್ಯ. ನಾಳೆ ಬೆಂಬಲಿಗರ ಚರ್ಚೆಯ ಬಳಿಕ ನನ್ನ ತೀರ್ಮಾನವನ್ನು ಮಂಡ್ಯದಲ್ಲಿಯೇ ಹೇಳುತ್ತೇನೆಂದು ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದರು.

ಮಂಡ್ಯ ಅಭ್ಯರ್ಥಿ ಕುಮಾರಸ್ವಾಮಿ ಅವರು ಭೇಟಿ ಮಾಡಲು ಬಂದ್ರೆ ಆಕ್ಷೇಪವಿಲ್ಲ. ಅಂಬರೀಶ್ ಅವರ ಮನೆ
ಯಾರೇ ಬಂದ್ರೂ ಸ್ವಾಗತಿಸುತ್ತದೆ. ಹಾಗಾಗಿ ಎಚ್‌ಡಿಕೆ ಜತೆಗೆ ಚರ್ಚೆಗೆ ಸಿದ್ಧ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಂಡ್ಯ ಸಂಸದೆ ಸುಮಲತಾ ಅವರು ಬೆಂಬಲವನ್ನು ಕೇಳುವುದು ನನ್ನ ಕರ್ತವ್ಯ, ನನಗಂತೂ ವಿಶ್ವಾಸವಿದೆ ಅವರು ನಮ್ಮ ಪಕ್ಷಕ್ಕೆ ಶಕ್ತಿಯನ್ನು ತುಂಬುತ್ತಾರೆ ಎಂದು ವಿಜಯೇಂದ್ರ ಭರವಸೆ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಅಸಮಾಧಾನ: ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಸಾಮಾಜಿಕ ಹೋರಾಟಗಾರ್ತಿ ನಜ್ಮಾ