Select Your Language

Notifications

webdunia
webdunia
webdunia
webdunia

ಡಿಕೆ ಬ್ರದರ್ಸ್ ರಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದ ಮಾಜಿ ಸಂಸದ

ಡಿಕೆ ಬ್ರದರ್ಸ್ ರಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದ ಮಾಜಿ ಸಂಸದ
ತುಮಕೂರು , ಮಂಗಳವಾರ, 17 ಜುಲೈ 2018 (20:12 IST)
ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರು ಮುಖ್ಯಮಂತ್ರಿಯನ್ನ ಬಳಸಿಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಮಾಜಿ ಸಂಸದ ಜಿ. ಎಸ್. ಬಸವರಾಜು ತುಮಕೂರಿನಲ್ಲಿ ವಾಗ್ದಾಳಿನಡೆಸಿದ್ದಾರೆ‌.

ತುಮಕೂರು ಜಿಲ್ಲೆಯಲ್ಲಿ ಹರಿಯುತ್ತಿರುವ ಹೇಮಾವತಿ ನೀರನ್ನ ರಾಮನಗರ, ಚೆನ್ನಪಟ್ಟಣಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ಮಾಡುತ್ತಿದ್ದಾರೆ. ಮೂಲಕ ತುಮಕೂರು ಜಿಲ್ಲೆಯ ಜನರಿಗೆ ಅನ್ಯಾಯ ಮಾಡಲು ಮುಂದಾಗಿದ್ದಾರೆ. ಜನರ ನಡುವೆ ಶಾಂತಿ ಕದಡುವ ಪ್ರಯತ್ನ ಅಣ್ಣ -ತಮ್ಮ ಮಾಡುತ್ತಿದ್ದಾರೆಇದನ್ನ ಖಂಡಿಸುತ್ತೇನೆ ಎಂದಿದ್ದಾರೆ

ಗುಬ್ಬಿ ತಾಲ್ಲೂಕಿನಿಂದ ಕುಣಿಗಲ್ ಮಾರ್ಗವಾಗಿ ಹೇಮಾವತಿ ನಾಲೆಯಿಂದ ನೀರು ತೆಗೆದುಕೊಂಡು ಹೋಗುವ ಎಕ್ಸ್ ಪ್ರೆಸ್ ಕೆನಾಲ್ ಗೆ  ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೋಜನೆ ಕೈ ಬಿಡದಿದ್ದರೆ ಜನರು ದಂಗೆ ಏಳುತ್ತಾರೆ. ಯೋಜನೆಗೆ ಮುಂದಾದ್ರೆ ಬಿಜೆಪಿ ಯಿಂದ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕನ ತಲೆಯಲ್ಲಿ ಜ್ಞಾನವೇ ಇಲ್ಲ ಎಂದ ಮಾಜಿ ಸಚಿವ!