Select Your Language

Notifications

webdunia
webdunia
webdunia
webdunia

ಅಸಮಾಧಾನ ಇರೋದು ನಿಜ. ಹಾಗಂತ ಪಕ್ಷ ಬಿಡಲ್ಲ- ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್

ಅಸಮಾಧಾನ ಇರೋದು ನಿಜ. ಹಾಗಂತ ಪಕ್ಷ ಬಿಡಲ್ಲ- ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್
ಬೆಂಗಳೂರು , ಬುಧವಾರ, 16 ಜನವರಿ 2019 (11:03 IST)
ಬೆಂಗಳೂರು : ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಡಾ.ಅಜಯ್ ಸಿಂಗ್ ‘ನನಗೆ ಅಸಮಾಧಾನ ಇರೋದು ನಿಜ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಿದ್ದೆ. ಹೀಗಾಗಿ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇಂದು ವೇಣುಗೋಪಾಲ್ ರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

 

‘ಮಂತ್ರಿ ಮಾಡಲಿ ಬಿಡಲಿ ಆದ್ರೆ ಪಕ್ಷ ಮಾತ್ರ ತೊರೆಯಲ್ಲ. 1977ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ತಮ್ಮ ತಂದೆ ಪಕ್ಷ ಬಿಟ್ಟಿಲ್ಲ. 7 ಜನ ಶಾಸಕರಿದ್ದರೂ ಕೂಡ ಕಾಂಗ್ರೆಸ್ ಕಟ್ಟಿದ್ದಾರೆ. ನಮ್ಮ ತಂದೆಯಿಂದ ಹಿಡಿದು ನಾವು ಕಾಂಗ್ರೆಸ್ ಕಟ್ಟಿದ್ದೇವೆ. ನಮ್ಮನ್ನು ಕಡೆಗಣಿಸಿರೋದು ನಿಜ. ಹಾಗಂತ ಪಕ್ಷ ಬಿಡಲ್ಲ’ ಎಂದು ಅವರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಅಪರೇಷನ್ ಕಮಲದಿಂದ ಶಾಸಕರನ್ನು ರಕ್ಷಿಸಲು ಜೆಡಿಎಸ್ ನಿಂದ ಹೊಸ ಪ್ಲಾನ್