Select Your Language

Notifications

webdunia
webdunia
webdunia
webdunia

ಬಜೆಟ್ ಮಂಡನೆ ಬೇಕೋ, ಬೇಡವೋ ಇಂದು ನಡೆಯಲಿದೆ ಮಹತ್ವದ ಸಭೆ

ಬಜೆಟ್ ಮಂಡನೆ ಬೇಕೋ, ಬೇಡವೋ ಇಂದು ನಡೆಯಲಿದೆ ಮಹತ್ವದ ಸಭೆ
ಬೆಂಗಳೂರು , ಸೋಮವಾರ, 25 ಜೂನ್ 2018 (11:43 IST)
ಬೆಂಗಳೂರು: ರಾಜ್ಯದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಂತೆ ಬಜೆಟ್ ಮಂಡನೆ ಕುರಿತಂತೆ ಹಲವು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಇಂದು ಸ್ಪಷ್ಟ ರೂಪ ಸಿಗಲಿದೆ.

ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಬಜೆಟ್ ಮಂಡನೆ ಬೇಕೋ ಬೇಡವೋ ಎಂಬ ಕುರಿತಂತೆ ಕರಡು ಸಮಿತಿ ಸಭೆ ನಡೆಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಭೆಯಲ್ಲಿ ಬಜೆಟ್ ಮಂಡನೆ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅಭಿಪ್ರಾಯದಂತೆ ಹಳೇ ಸರ್ಕಾರದ ಬಜೆಟ್ ಗೆ ಪೂರಕವಾಗಿ ಬಜೆಟ್ ಮಂಡಿಸಲು ಹಲವು ಸಮಸ್ಯೆಗಳಿವೆ. ಹೊಸದಾಗಿ ನೂರಕ್ಕೂ ಹೆಚ್ಚು ಶಾಸಕರಿದ್ದಾರೆ. ಹಳೇ ಸರ್ಕಾರದಲ್ಲಿರುವ ಶಾಸಕರು ಕಡಿಮೆ ಇದ್ದಾರೆ. ಹೊಸದಾಗಿ ಬಂದ ಶಾಸಕರು ಹಕ್ಕು ಚ್ಯುತಿ ಮಂಡಿಸಿದರೆ ನಾನೇನು ಮಾಡಲಿ ಎಂದು ಸಿಎಂ ಮಾಧ್ಯಮಗಳ ಮುಂದೆ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರವು ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಉತ್ತಮ ಎಂದಿದ್ದು ಯಾರು ?