Select Your Language

Notifications

webdunia
webdunia
webdunia
webdunia

ಈ ಬಾರಿ ಬಜೆಟ್ ರೈತ ವಿರೋಧಿಯಾಗಿದೆ-ಬಿ ವೈ ವಿಜಯೇಂದ್ರ

ವಿಜಯೇಂದ್ರ

geetha

bangalore , ಶುಕ್ರವಾರ, 16 ಫೆಬ್ರವರಿ 2024 (14:01 IST)
ಬೆಂಗಳೂರು-ಸಿಎಂ ಮಂಡನೆ ಮಾಡಿರುವ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ ಎಂದು ನಗರದಲ್ಲಿ ವಿಜಯೇಂದ್ರ ಕಿಡಿಕಾರಿದ್ದಾರೆ.ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅಂಶಯಿಲ್ಲ.ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಕ್ಕೆ ಈ ಬಜೆಟ್ ಮಾಡಿದ್ದಾರೆ.ಮೊನ್ನೆ ದೆಹಲಿ ಚಲೋ ಮಾಡಿದ್ರು.ಇವತ್ತು ಕೂಡ ಕೇಂದ್ರ ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದಾರೆ.ರೈತರಿಗೆ ಅನುಕೂಲ ಆಗದೇ ಇರೋ ಬಜೆಟ್  ಆಗಿದೆ.ಇವರ ಪ್ರಣಾಲಿಕೆಯಲ್ಲಿ ನೇತಾರರ ಅಭಿವೃದ್ಧಿ ಬಗ್ಗೆ ಹೇಳಿದ್ರು.ಆದ್ರೆ ಇವತ್ತು ಆ ಮಾತೇ ಇಲ್ಲ.ನುಡಿದಂತೆ ನಡೆಯದ ಸರ್ಕಾರ ಇದು.ರೈತರಿಗೆ ಬಡವರಿಗೆ ಅನ್ಯಾಯ ಆಗಿರೋ ಬಜೆಟ್ ಇದಾಗಿದೆ.

ಬರಗಾಲ ಸಂದರ್ಭದಲ್ಲಿ ಯಾವುದೇ ರೀತಿ ಸಹಾಯ ಆಗದೇ ಇರೋ ಬಜೆಟ್  ಆಗಿದೆ.ಒಬ್ಬ ಅನುಭವಿ ಸಿಎಂ ಈ ರೀತಿ ಬಜೆಟ್ ಮಾಡ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ.ರಾಜ್ಯ ಜನರ ಪಾಲಿಗೆ ಬದುಕಿದ್ದು ಸತ್ತಂತೆ ಎಂದ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಬಜೆಟ್ 2024 ಹೈಲೈಟ್ಸ್