Select Your Language

Notifications

webdunia
webdunia
webdunia
webdunia

ಕಾವೇರಿ ನೀರನ್ನ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ-ಮಾಜಿ ಸಚಿವ ಆರ್ ಅಶೋಕ್

ಕಾವೇರಿ ನೀರನ್ನ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ-ಮಾಜಿ ಸಚಿವ ಆರ್ ಅಶೋಕ್
bangalore , ಸೋಮವಾರ, 21 ಆಗಸ್ಟ್ 2023 (15:40 IST)
ಮಾಜಿ ಸಚಿವ ಆರ್ ಅಶೋಕ್ ಕಾವೇರಿ ನೀರನ್ನ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ.ಕಾವೇರಿ ರಕ್ಷಣೆ ಮಾಡ್ತೀವಿ ಅನ್ನೋ ನೆಪ ಇಟ್ಟುಕೊಂಡು ಮೈತ್ರಿ ಪಕ್ಷಕ್ಕೆ ಲಾಭ ಮಾಡಲು ನೀರು ಬಿಡ್ತಿದ್ದಾರೆ.ಹೈಕಮಾಂಡ್ ಸಂತೋಷ ಪಡಿಸಲು ನೀರು ಬಿಡ್ತಿದ್ದಾರೆ.ತಮಿಳುನಾಡಿಗೆ ಫೆವರ್ ಮಾಡಿದ್ದಾರೆ.ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡಿದ್ರು.ಈಗ ತಮಿಳುನಾಡಿಗೆ ಫೆವರ್ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ಅಲ್ಲದೇ ಸರ್ವಪಕ್ಷ ಸಭೆಗೆ ಗೈರು ಆಗೋ ಬಗ್ಗೆ ನಿರ್ಧಾರ ಆಗಿಲ್ಲ.ಆದ್ರೆ ಸರ್ಕಾರದ ನಡೆ ವಿರೋಧ ಮಾಡ್ತೀವಿ.ತಮಿಳುನಾಡಿಗೆ ನೀರು ಹೋಗೋ ವ್ಯವಸ್ಥೆ ಮಾಡಿದ್ದಾರೆ.ಸೋನಿಯಾಗಾಂಧಿ ರಾಹುಲ್ ಗಾಂಧಿಯನ್ನ ಸುಪ್ರಿತಾಗೊಳಿಸಲು ತಮಿಳುನಾಡಿಗೆ ನೀರು ಬಿಡ್ತಾ ಇದಾರೆ.ಕಾಂಗ್ರೆಸ್ ನವರು ಅವಾಗ ಬಿದಿಗಿಳಿದು ಹೋರಾಟ ಮಾಡಿದ್ರು.ಮಂಡ್ಯದಲ್ಲಿ ಸಹ ಇದರ ವಿರುದ್ಧ ಹೋರಾಟ ಮಾಡ್ತಾ ಇದೀವಿ.23 ಕ್ಕೆ ಹೋರಾಟ ಮಾಡೋಣ ಅನ್ಕೊಂಡಿದ್ವಿ.ಆದರೆ ಚಂದ್ರಯಾನ ಇರೋದರಿಂದ ಮುಂದೂಡಿಕೆ ಮಾಡ್ತಾ ಇದೀವಿ.ಆಗಸ್ಟ್ 29ಕ್ಕೆ ಪ್ರತಿಭಟನೆ ಮಾಡ್ತೀವಿ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಮತ್ತು ಪ್ರಕಾಶ್ ರಾಜ್ ವಿರುದ್ಧ ಸಿಟಿ ರವಿ ವಾಗ್ದಾಳಿ