Select Your Language

Notifications

webdunia
webdunia
webdunia
webdunia

ಹು-ಧಾ ಮಹಾನಗರ ಪಾಲಿಕೆಯ ಸ್ವಚ್ಚ ಭಾರತ ಮಿಷನ್ ರಾಯಭಾರಿಗಳಾಗುತ್ತಾರಾ ಈ ನಟರು

ಹು-ಧಾ ಮಹಾನಗರ ಪಾಲಿಕೆಯ ಸ್ವಚ್ಚ ಭಾರತ ಮಿಷನ್ ರಾಯಭಾರಿಗಳಾಗುತ್ತಾರಾ ಈ ನಟರು
ಬೆಂಗಳೂರು , ಗುರುವಾರ, 13 ಸೆಪ್ಟಂಬರ್ 2018 (07:00 IST)
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಚ ಭಾರತ ಮಿಷನ್ ರಾಯಭಾರಿಗಳಾಗುವಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರಿಬ್ಬರಲ್ಲಿ ಮನವಿ ಮಾಡಲಾಗಿದೆ ಎಂದು ಪಾಲಿಕೆಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಾನಂದ ಮುತ್ತಣ್ಣ ತಿಳಿಸಿದ್ದಾರೆ.


ನಗರದ ಹೆಚ್ಚು ಸಚ್ಚತೆಗೆ ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯವರು  ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ  ಮನವಿ ಮಾಡಿಕೊಂಡಿದ್ದಾರೆ.


ಈಗಾಗಲೇ ಪುನೀತ್ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಯಾವುದೇ ಸಂಭಾವನೆ ಪಡೆಯದೇ ಬ್ರ್ಯಾಂಡ್ ಅಂಬಾಸಿಡರ್ ಆಗಲು ಒಪ್ಪಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅವರ ಜೊತೆ ಕೂಡ ಅಂತಿಮ ಮಾತುಕತೆ ನಡೆದಿರುವುದಾಗಿ ಸಮಿತಿಯ ಅಧ್ಯಕ್ಷ ಶಿವಾನಂದ ಮುತ್ತಣ್ಣ ತಿಳಿಸದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಈ ಮಾಡೆಲ್ ತನ್ನ ಸ್ತನದ ಗಾತ್ರ ಹೆಚ್ಚಿಸಿಕೊಂಡಿದ್ದು ಹೇಗಂತೆ ಗೊತ್ತಾ?