Select Your Language

Notifications

webdunia
webdunia
webdunia
webdunia

ಅಂಬುಲೆನ್ಸ್ ಗೆ ದಾರಿ ಬಿಟ್ರು; ಆ ಬಳಿಕ ಬಡಿದಾಡಿಕೊಂಡ್ರು!

ಅಂಬುಲೆನ್ಸ್ ಗೆ ದಾರಿ ಬಿಟ್ರು; ಆ ಬಳಿಕ ಬಡಿದಾಡಿಕೊಂಡ್ರು!
ನೆಲಮಂಗಲ , ಮಂಗಳವಾರ, 31 ಜುಲೈ 2018 (13:18 IST)
ಅಂಬ್ಯುಲೆನ್ಸ್ ಗೆ ಜಾಗ ಮಾಟ್ಟು ಮಾನವೀಯತೆ ಮೆರೆದವರು ಆ ಬಳಿಕ ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ.  ಘಟನೆಯಲ್ಲಿ ಬೈಕ್ ಸವಾರನೊಬ್ಬ ಗಾಯಗೊಂಡಿದ್ದಾನೆ.

ನೆಲಮಂಗಲದ ನವಯುಗ ಟೋಲ್ ನಲ್ಲಿ ಗಲಾಟೆ ನಡೆದಿದೆ. ತುಮಕೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುವ ಮಾರ್ಗದಲ್ಲಿ ಆಂಬುಲೆನ್ಸ್ ಬಂದಿದೆ. ಆಗ ಅಂಬುಲೆನ್ಸ್ ಗೆ ವಾಹನಗಳ ಸವಾರರು ದಾರಿ ಮಾಡಿಕೊಟ್ಟಿದ್ದಾರೆ.

ಆದರೆ ಅಂಬ್ಯುಲೆನ್ಸ್ ಹೋದ ಬಳಿಕ ಬೈಕ್ ಸವಾರನೊಬ್ಬ ಕೆಳಗೆ ಬಿದ್ದಿದ್ದಾನೆ. ಹೀಗಾಗಿ ವಾಹನ ಸವಾರರ ನಡುವೆ ಗಲಾಟೆ ನಡೆದು, ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ನೆಲಮಂಗಲ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳೆದ ಎರಡು ದಿನದಿಂದ ಗಲಾಟೆ ಗದ್ದಲದಲ್ಲಿ ನವಯುಗ ಟೋಲ್ ಸುದ್ದಿಯಲ್ಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕಕ್ಕಾಗಿ ಬೆಳಗಾವಿ ಸುವರ್ಣಸೌಧದ ಎದುರು ಸ್ವಾಮೀಜಿಗಳ ಪ್ರತಿಭಟನೆ