Select Your Language

Notifications

webdunia
webdunia
webdunia
webdunia

ಸುಪ್ರೀಂಕೋರ್ಟ್ ಆದೇಶ ಪಾಲಿಸುವುದು ಕಷ್ಟ: ಎಂ.ಬಿ.ಪಾಟೀಲ್

ಸುಪ್ರೀಂಕೋರ್ಟ್ ಆದೇಶ ಪಾಲಿಸುವುದು ಕಷ್ಟ: ಎಂ.ಬಿ.ಪಾಟೀಲ್
ವಿಜಯಪುರ , ಗುರುವಾರ, 3 ಮೇ 2018 (15:42 IST)
ಕಾವೇರಿ ಕಣಿವೆಯಿಂದ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ ಆದರೆ ಬಿಡಲು ನಮ್ಮ ಬಳಿ ನೀರಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 
ಚುನಾವಣಾ ಪ್ರಚಾರದ ವೇಳೆಯೇ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ಸುಪ್ರೀಂಕೋರ್ಟ್ ಯಾವ ಹಿನ್ನಲೆಯಲ್ಲಿ ಈ ಆದೇಶ ಮಾಡಿದೆ ಗೊತ್ತಿಲ್ಲ, ಕಾನೂನು ಸಲಹೆ ಪಡೆದು, ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತೇವೆ ಎಂದು ಸರಕಾರದ ಪರವಾಗಿ ಹೇಳಿಕೆ ನೀಡಿದ್ದಾರೆ. 
 
ಕಾವೇರಿ ಕಣಿವೆಯಲ್ಲಿರುವ ಜಲಾಶಯಗಳಲ್ಲಿ ಇರುವುದೇ ಒಂಭತ್ತು ಟಿಎಂಸಿ ನೀರು, ಆ ನೀರು ಕುಡಿಯುವುದಕ್ಕಾಗಿಯೇ ಸಾಲುವುದಿಲ್ಲ ಎಂದ ಸಚಿವರು ಅದಲ್ಲದೇ ಡಿಸೆಂಬರಿಗೆ ನೀರು ಬಿಡುಗಡೆಯ ಅವಧಿ ಮುಗಿಯುತ್ತದೆ ಎಂದಿದ್ದಾರೆ. ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್‌ ಪಕ್ಷದ ಎಟಿಎಂ: ಯೋಗಿ ಆದಿತ್ಯನಾಥ್