Select Your Language

Notifications

webdunia
webdunia
webdunia
webdunia

ಮನೆಗೆ ನುಗ್ಗಿ ಮಾಲೀಕನ ಕೊಂದ ದುಷ್ಕರ್ಮಿಗಳು

ಮನೆಗೆ ನುಗ್ಗಿ ಮಾಲೀಕನ ಕೊಂದ ದುಷ್ಕರ್ಮಿಗಳು
ಕಲಬುರಗಿ , ಗುರುವಾರ, 25 ಅಕ್ಟೋಬರ್ 2018 (17:12 IST)
ಮನೆಗೆ ನುಗ್ಗಿ ಬಡಿಗೆಯಿಂದ ಹೊಡೆದು ಮನೆ ಮಾಲೀಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಐದಾರು ಜನ ದುಷ್ಕರ್ಮಿಗಳು ರಾತ್ರಿ ವೇಳೆ ಮನೆ ಹೊರಗೆ ಮಲಗಿದ್ದ ಮನೆ ಮಾಲೀಕ ಬಸವರಾಜ ತೆಲಕಪಲ್ಲಿ (50) ಎಂಬುವರನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.

ಮನೆಯೊಳಗೆ ಇದ್ದವರು ಗಲಾಟೆ ಕೇಳಿ ಬಾಗಿಲು ತೆರೆದು ಹೊರಬಂದಾಗ ಮನೆಯೊಳಗಿದ್ದ ಬಾಲಮ್ಮ, ರವಿ, ವೆಂಕಟೇಶ ಎಂಬುವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೇಡಂ, ಚಿಂಚೋಳಿಯಲ್ಲಿ ಗಾಂಧೀಜಿ ಸ್ತಬ್ತ ಚಿತ್ರಕ್ಕೆ ಸ್ವಾಗತ