Select Your Language

Notifications

webdunia
webdunia
webdunia
webdunia

ಕುಖ್ಯಾತ ರೌಡಿಗೆ ಗುಂಡೇಟು!

ಕುಖ್ಯಾತ ರೌಡಿಗೆ ಗುಂಡೇಟು!
ಬೆಂಗಳೂರು , ಭಾನುವಾರ, 27 ಜನವರಿ 2019 (14:57 IST)
ಇಬ್ಬರು ವ್ಯಾಪಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಕುಖ್ಯಾತ ರೌಡಿ ಗೌತಮ್ ಅಲಿಯಾಸ್ ಆರ್ಮುಗಂಗೆ ಯನ್ನು  ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಯಶವಂತಪುರ ಮಾಡೆಲ್ ಕಾಲೋನಿಯ ರೌಡಿ ಗೌತಮ್(22)ಬಲಗಾಲಿಗೆ ಗುಂಡೇಟ್ ತಗುಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಾಣಾಪಾಯದಿಂದ ರೌಡಿ ಪಾರಾಗಿದ್ದಾನೆ. ಬಂಧಿಸಲು ಹೋದಾಗ ಗೌತಮ್ ಲಾಂಗ್ನಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಯಶವಂತಪುರ ಠಾಣೆಯ ಪೇದೆಗಳಾದ ಶಿವಕುಮಾರ್ ಹಾಗೂ ಭಜಂತ್ರಿ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಶವಂತಪುರ ರೈಲ್ವೆ ನಿಲ್ದಾಣ ಬಳಿಯ ಮಾಡೆಲ್ ಕಾಲೋನಿ ಬಳಿ ಪಾರ್ಟಿ ಮುಗಿದ ನಂತರ ನಡೆದ ಜಗಳದಲ್ಲಿ ರೌಡಿ ಗೌತಮ್ ಮತ್ತವನ ಸ್ನೇಹಿತರಾದ ಸಲ್ಮಾನ್ ಹಾಗೂ ಪ್ರಶಾಂತ್ ಪರಿಚಯಸ್ಥರಾದ ಚಿಲ್ಲರೆ ಅಂಗಡಿ ನಡೆಸುತ್ತಿದ್ದ ವಿನೋದ್ಕುಮಾರ್ ತರಕಾರಿ ವ್ಯಾಪಾರಿಯಾಗಿದ್ದ ಮಾರುತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು.

ಸ್ಥಳೀಯರು ರಕ್ಷಣೆಗೆ ಧಾವಿಸಿದ ಕೂಡಲೇ ಗೌತಮ್ ಸೇರಿ ಮೂವರು ಪರಾರಿಯಾಗಿದ್ದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪರಾರಿಯಾಗಿದ್ದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡರು. ರೌಡಿ ಗೌತಮ್ ಮತ್ತವನ ಸ್ನೇಹಿತರಾದ ಸಲ್ಮಾನ್ ಹಾಗೂ ಪ್ರಶಾಂತ್ ಜೊತೆ ನಿನ್ನೆ ರಾತ್ರಿ 2ರ ವೇಳೆ ಪೈಪ್ಲೇನ್ ಫ್ಲಾಟಿನಂ ಸಿಟಿ ನಲ್ಲಿರುವ ಮಾಹಿತಿ ಆಧರಿಸಿ ಯಶವಂತಪುರ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುರಾಜ್ ಅವರು ಪೇದೆಗಳಾದ ಶಿವಕುಮಾರ್ ಹಾಗೂ ಭಜಂತ್ರಿ ಇನ್ನಿತರ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡರು.



Share this Story:

Follow Webdunia kannada

ಮುಂದಿನ ಸುದ್ದಿ

ಗಂಗಮ್ಮದೇಗುಲ ವಿಷ ಪ್ರಸಾದ ಪ್ರಕರಣ: ಸಂಸದ ಹೇಳಿದ್ದೇನು?