Select Your Language

Notifications

webdunia
webdunia
webdunia
webdunia

ಹಿಂದು ಮಹಾಸಭಾ ಕಾರ್ಯದರ್ಶಿ ನಡೆಗೆ ಖಂಡನೆ: ಕಾಂಗ್ರೆಸ್ ನಿಂದ ಪ್ರತಿಭಟನೆ

ಹಿಂದು ಮಹಾಸಭಾ ಕಾರ್ಯದರ್ಶಿ ನಡೆಗೆ ಖಂಡನೆ: ಕಾಂಗ್ರೆಸ್ ನಿಂದ ಪ್ರತಿಭಟನೆ
ಯಾದಗಿರಿ , ಸೋಮವಾರ, 4 ಫೆಬ್ರವರಿ 2019 (13:21 IST)
ಜನೇವರಿ 30 ರಂದು ಮಹಾತ್ಮ ಗಾಂಧಿಜೀಯವರ ಪುಣ್ಯ ಸ್ಮರಣೆ ದಿನ ಹಿಂದು ಮಹಾಸಭಾ ಕಾರ್ಯದರ್ಶಿ ತೋರಿದ ನಡುವಳಿಕೆ ಖಂಡಿಸಿ ಪ್ರತಿಭಟನೆ ನಡೆದಿದೆ.

ಮಹಾತ್ಮ ಗಾಂಧಿಜೀಯವರ ಪುಣ್ಯ ಸ್ಮರಣೆ ದಿನ ಹಿಂದು ಮಹಾಸಭಾ ಕಾರ್ಯದರ್ಶಿ ಪೂಜಾ ಶಕುನ ಪಾಂಡೆ, ಗಾಂಧಿಜೀಯವರನ್ನು ಅವಮಾನಿಸಿರುವ ಘಟನೆಯನ್ನು ವಿರೋಧಿಸಿ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್ ನೇತೃತ್ವದಲ್ಲಿ ನಗರದ ಸುಭಾಷ ವೃತ್ತ ಬಳಿ ಪ್ರತಿಭಟನೆ ನಡೆಸಲಾಯಿತು. 

ಜನೇವರಿ 30 ರಂದು ದೇಶಾದ್ಯಂತ ಸಮಸ್ತ ಭಾರತೀಯರು ದೇಶದ ರಾಷ್ಟ್ರಪೀತ ಮಹಾತ್ಮ ಗಾಂಧಿಜೀಯವರ ಪುಣ್ಯಸ್ಮರಣೆ ದಿನದಂದು ಸತ್ಯ, ಅಹಿಂಸೆ, ತತ್ವದ ಮಾರ್ಗಗಳು ಮತ್ತು ದೇಶದ ಸ್ವಾತಂತ್ರಕ್ಕಾಗಿ ಉಪ್ಪಿನ ಸತ್ಯಾಗ್ರಹ ಮತ್ತು ತ್ಯಾಗ ಬಲಿದಾನಗಳನ್ನು ನೆನೆಯುತ್ತಿದ್ದರೇ ಹಿಂದು ಮಹಾಸಭಾ ಕಾರ್ಯದರ್ಶಿ ಪೂಜಾ ಶಕುನ ಪಾಂಡೆ ಮತ್ತು ಅವರ ಬೆಂಬಲಿಗರು ಗಾಂಧಿಜೀಯವರ ಅಣುಕು ಪುತ್ಥಳಿಗೆ ಗುಂಡಿಕ್ಕುವ ಮೂಲಕ ರಾಷ್ಟ್ರಕ್ಕೆ ಮತ್ತು ರಾಷ್ಟ್ರದ ಜನರಿಗೆ  ಅವಮಾನಿಸಿದ್ದಾರೆ.

ಕೂಡಲೇ ಅವರನ್ನು ಬಂಧಿಸಿ ರಾಷ್ಟ್ರ ದ್ರೋಹದಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಮತ ಹಾಕಿದ ಮುಸ್ಲಿಮರು ನಮ್ಮ ಧರ್ಮದವರೇ ಅಲ್ಲ ಎಂದ ಸಚಿವ ಜಮೀರ್ ಅಹ್ಮದ್