Select Your Language

Notifications

webdunia
webdunia
webdunia
webdunia

ಚೌಲ್ಟ್ರಿ ವಿಚಾರದಲ್ಲಿ ಮಹದಾಯಿ ಹೋರಾಟಗಾರರು ಹಾಗು ಬಿಜೆಪಿ ವಿರುದ್ಧ ಜಟಾಪಟಿ

ಚೌಲ್ಟ್ರಿ ವಿಚಾರದಲ್ಲಿ ಮಹದಾಯಿ ಹೋರಾಟಗಾರರು ಹಾಗು ಬಿಜೆಪಿ ವಿರುದ್ಧ ಜಟಾಪಟಿ
ಬೆಂಗಳೂರು , ಸೋಮವಾರ, 25 ಡಿಸೆಂಬರ್ 2017 (10:23 IST)
ಬೆಂಗಳೂರು: ರಾಜಧಾನಿಯಲ್ಲಿ ಮಹದಾಯಿ ಹೋರಾಟದ ಕಿಚ್ಚು ಮುಂದುವರಿದಿದ್ದು, ಚೌಲ್ಟ್ರಿ ವಿಚಾರದಲ್ಲಿ ಹೋರಾಟಗಾರರು ಹಾಗು ಬಿಜೆಪಿ ವಿರುದ್ಧ ಜಟಾಪಟಿ ನಡೆದಿದೆ.


ಹೋರಾಟಗಾರರಲ್ಲಿದ್ದ ಮಹಿಳೆಯರು ಶ್ರೀ ಕೋದಂಡರಾಮ ಭಜನಾಮಂದಿರದ ಚೌಲ್ಟ್ರಿಯಲ್ಲಿ ವಾಸವಿದ್ದು, ಅಲ್ಲೆ ನಿತ್ಯಕರ್ಮಗಳನ್ನು ಮುಗಿಸಿ ಮತ್ತೇ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆ ಚೌಲ್ಟ್ರಿ ಕಾಂಗ್ರೆಸ್ ನ ಮುಖಂಡರೊಬ್ಬರಿಗೆ ಸೇರಿದ್ದರಿಂದ  ಅಲ್ಲಿ ವಾಸ್ತವ್ಯ ಹೂಡಿದಕ್ಕೆ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ.


ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು’ ನಾವು ಯಾರ ಹಂಗಿನಲ್ಲೂ ಇಲ್ಲ. ನಮ್ಮಲ್ಲೂ ಶ್ರೀಮಂತರು ಇರುವ ಕಾರಣ ದಿನಕ್ಕೆ 12 ಸಾವಿರ ರೂ. ಕೊಟ್ಟು ವಾಸ್ತವ್ಯ ಹೂಡಿರುವುದಾಗಿ’ ಬಿಜೆಪಿಯವರಿಗೆ ಖಡಕ್ ಉತ್ತರ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ರಕ್ಷಣೆ