Select Your Language

Notifications

webdunia
webdunia
webdunia
webdunia

ಕಾವೇರಿ ಸಂಗಮದಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧ

ಕಾವೇರಿ ಸಂಗಮದಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧ
ಮಂಡ್ಯ , ಗುರುವಾರ, 13 ಸೆಪ್ಟಂಬರ್ 2018 (18:10 IST)
ಕಾವೇರಿ ಸಂಗಮದಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧ ವಿಧಿಸಿ  ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟದ ಗಂಜಾಂನಲ್ಲಿರುವ ಪ್ರವಾಸಿತಾಣ ಕಾವೇರಿ ಸಂಗಮದಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧ ವಿಧಿಸಲಾಗಿದೆ. ಶ್ರೀರಂಗಪಟ್ಟಣದ  ತಹಶೀಲ್ದಾರ್ ನಾಗೇಶ್ ಈ ಆದೇಶ ಹೊರಡಿಸಿದ್ದಾರೆ. ಗಣೇಶ ವಿಸರ್ಜನೆ ವೇಳೆ ಕಾವೇರಿ ಸಂಗಮದಲ್ಲಿ ಅವಘಡ ಸಂಭವಿಸುವ ಹಿನ್ನಲೆಯಲ್ಲಿ ‌ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.  ತಾಲೂಕು ಆಡಳಿತವು ಸೆ.13 ರಿಂದ ಸೆ.23 ರವರೆಗೆ 10 ದಿನಗಳ ಕಾಲ ಕಾವೇರಿ ಸಂಗಮದಲ್ಲಿ ಗಣಪತಿ ವಿಸರ್ಜನೆ ಮಾಡಲು ನಿರ್ಬಂಧ‌ ಹೇರಿದೆ.

ಒಂದು ವೇಳೆ ಈ ಆದೇಶ ಉಲ್ಲಂಘಿಸಿದರೆ ತಪ್ಪಿತಸ್ಥರ ವಿರುದ್ಧ  ಕಾನೂನು ಕ್ರಮದ ಕೈಗೊಳ್ಳದಾಗಿಯೂ ಎಚ್ಚರಿಕೆ ನೀಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬರ ಪೀಡಿತ ತಾಲೂಕುಗಳಲ್ಲಿ ಬರಗಾಲ ಪರಿಹಾರ ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸಿ: ಸಚಿವರ ಸೂಚನೆ