Select Your Language

Notifications

webdunia
webdunia
webdunia
webdunia

ಆಕಸ್ಮಿಕ ಬೆಂಕಿಗೆ ಮಗು ಸಜೀವ ದಹನ

ಆಕಸ್ಮಿಕ ಬೆಂಕಿಗೆ ಮಗು ಸಜೀವ ದಹನ
ಕೊಪ್ಪಳ , ಶನಿವಾರ, 13 ಅಕ್ಟೋಬರ್ 2018 (14:10 IST)
ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣ 8 ತಿಂಗಳ ಮಗು ಸಜೀವವಾಗಿ ಸುಟ್ಟು ಕರುಕಲಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತರಲಕಟ್ಟಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಗುಡಿಸಲಿನ ಜೋಳಿಗೆಯಲ್ಲಿ ಮಲಗಿದ್ದ ಎಂಟು ವರ್ಷದ ಮಹೇಶ್, ಸಜೀವವಾಗಿ ಸುಟ್ಟು ಕರುಕಲಾಗಿರುವ ದುರ್ಧೈವಿ ಮಗು. ನಿಂಗಪ್ಪಾ- ಸುನೀತಾ ದಂಪತಿಯ ಮಗು ಘಟನೆಯಲ್ಲಿ ಅಸುನೀಗಿದೆ.

ಮಗುವಿನ ತಂದೆ- ತಾಯಿ ಜೋಳಿಗೆಯಲ್ಲಿ ಮಹೇಶ್ ನನ್ನು ಮಲಗಿಸಿ ಹೊಲದಲ್ಲಿ ಕೆಲಸಕ್ಕೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಶಾರ್ಟ್​ ಸರ್ಕ್ಯೂಟ್ ನಿಂದ ಬೆಂಕಿ‌ ತಗುಲಿದ್ದರಿಂದ, ಮನೆಯಲ್ಲಿ ಮಲಗಿದ್ದ ಮಗು ಸುಟ್ಟು ಕರಕಲಾಗಿದೆ.  

ಈ ಸಂಬಂಧ, ಬೇವೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದುರುದ್ದೇಶಪೂರಿತ ಪ್ರಕರಣ: ಪೊಲೀಸ್ ಅಧಿಕಾರಿಗಳಿಗೆ ಬಿತ್ತು ದಂಡ