Select Your Language

Notifications

webdunia
webdunia
webdunia
webdunia

ಪರೇಶ್ ಸಾವಿನ ನಂತರ ಹೊತ್ತಿ ಉರಿಯುತ್ತಿದೆ ಉತ್ತರ ಕನ್ನಡ

ಪರೇಶ್ ಸಾವಿನ ನಂತರ ಹೊತ್ತಿ ಉರಿಯುತ್ತಿದೆ ಉತ್ತರ ಕನ್ನಡ
ಶಿರಸಿ , ಮಂಗಳವಾರ, 12 ಡಿಸೆಂಬರ್ 2017 (10:55 IST)
ಶಿರಸಿ: ಪರೇಶ್ ಅನುಮಾನಾಸ್ಪದ ಸಾವಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
 

ಶಿರಸಿಯಲ್ಲಿ ಬೃಹತ್ ಪ್ರತಿಭಟನಾಕಾರರ ಗುಂಪು ಹಿಂಸಾಚಾರಕ್ಕೆ ಇಳಿದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ. ಇಲ್ಲಿ ಹಿಂದೂ ಪರ  ಸಂಘಟನೆಗಳು ಬಂದ್ ಗೆ ಕರೆ ನೀಡಿತ್ತು. ಪರೇಶ್ ಎಂಬ ಯುವಕನನ್ನು ಅಮಾನುಷವಾಗಿ ಕೊಂದಿರುವುದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಚರ್ಚಿಸಲು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಇನ್ನೊಂದೆಡೆ ಬಿಜೆಪಿ ಕೂಡಾ ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಋತಿಮತಿಯಾದ ಬಾಲಕಿಯರು ವಾರದವರೆಗೆ ಹೊರಗೆ