Select Your Language

Notifications

webdunia
webdunia
webdunia
webdunia

ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧೆ

ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧೆ
ತುಮಕೂರು , ಗುರುವಾರ, 14 ಮಾರ್ಚ್ 2019 (13:55 IST)
ದಿ. ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡೋ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಮಠದಲ್ಲಿ  ತೇಜಸ್ವಿನಿ ಅನಂತ್ ಕುಮಾರ್ ಹೇಳಿಕೆ ನೀಡಿದ್ದು, ಯಾವುದೇ ಶುಭಕಾರ್ಯಕ್ಕೆ‌ ಮುನ್ನ ಅನಂತ್ ಕುಮಾರ್ ಸಿದ್ದಗಂಗಾ ಮಠಕ್ಕೆ  ಭೇಟಿ ನೀಡಿ ಶ್ರೀ ಗಳ ಆಶಿರ್ವಾದ ಪಡೆಯುತ್ತಿದ್ದರು. ನಾನು ಕೂಡ ಶುಭಕಾರ್ಯಕ್ಕೋಸ್ಕರ ಮಠಕ್ಕೆ ಬಂದು ಶ್ರೀಗಳ ಆಶಿರ್ವಾದ ಪಡೆಯುತ್ತಿದ್ದೇನೆ ಎಂದರು. ‌

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವಿದೆ. ಬಿಜೆಪಿ ಮುಖಂಡರು ಈ ಬಗ್ಗೆ ಸಮ್ಮತಿಸಿದ್ದಾರೆ.
ಮೋದಿಯವರ ದೇಶದ ಅಭಿವೃದ್ಧಿ ಕೆಲಸ ಹಾಗೂ ಮೋದಿ ಅವರ ದೇಶಭಕ್ತಿಯ ಅಲೆ ಇದೆ.
ಆ ಅಲೆಯೇ ನಮ್ಮ ಗೆಲುವಿಗೆ ಕಾರಣವಾಗಲಿದೆ ಎಂದರು.

ದಿವಂಗತ ಅನಂತ್ ಕುಮಾರ್ ರವರ 22 ವರ್ಷಗಳ ಸೇವೆ ಅಭಿವೃದ್ಧಿ ಕೆಲಸ ಶ್ರೀ ರಕ್ಷೆಯಾಗಲಿದೆ. ಮೋದಿ ಅಲೆಯಲ್ಲಿ ಎಲ್ಲಾ ಎದುರಾಳಿಗಳು ತೇಲಿ ಹೋಗ್ತಾರೆ. ಹಾಗಾಗಿ ನಮಗೆ ಯಾವುದೇ ಎದುರಾಳಿಗಳು ಇಲ್ಲ, ಗೆಲುವು ನಮ್ಮದೇ. ಮುಂದಿನ ಪ್ರಧಾನಿ ಮೋದಿಯಾಗುವುದು ನಿಶ್ಚಿತ ಅಂತ ತುಮಕೂರು ಮಠದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಹೇಳಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಮಾತೆ ಮಹಾದೇವಿಗೆ ತಿಂಗಳ ಆಯುಷ್ಯ ಧಾರೆ ಎರೆದವರಾರು?