Select Your Language

Notifications

webdunia
webdunia
webdunia
webdunia

ಕುರುಬ ಸಮಾಜವನ್ನು ರಾಜಕೀಯಕ್ಕೆ ಸಿದ್ದು ಬಳಸಿಕೊಂಡಿದ್ದಾರೆ ಎಂದ ಸ್ವಾಮೀಜಿ..!

ಕುರುಬ ಸಮಾಜವನ್ನು ರಾಜಕೀಯಕ್ಕೆ ಸಿದ್ದು ಬಳಸಿಕೊಂಡಿದ್ದಾರೆ ಎಂದ ಸ್ವಾಮೀಜಿ..!
ಹುಬ್ಬಳ್ಳಿ , ಮಂಗಳವಾರ, 1 ಜನವರಿ 2019 (17:12 IST)
ಕುರುಬ ಸಮಾಜವನ್ನು ಮಾಜಿ ಸಿಎಮ್ ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ಆದರೆ ಕುರುಬ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬಸವರಾಜ್ ದೇವರು ಸ್ವಾಮೀಜಿ ಈ ಆರೋಪ ಮಾಡಿದ್ದಾರೆ. ಮನಸೂರು ರೇವಣಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಬಸವರಾಜ ದೇವರು ಮಾತನಾಡಿ, ಸಿದ್ದರಾಮಯ್ಯನವರು ನನ್ನಿಂದಲೇ ಸಮಾಜ ಎನ್ನುವ ಭಾವನೆ ಕೈಬಿಡಬೇಕು. ಪ್ರಸ್ತುತ ಸರ್ಕಾರದಲ್ಲಿ ಹಲವು ಕುರುಬ ಸಮಾಜದ ಸಚಿವರಿದ್ದಾರೆ. ಅಧಿಕಾರಕ್ಕೆ ಬರಲು ಮಾತ್ರ ಸಮಾಜ ಬಳಸಿಕೊಂಡು ನಂತರ ಕಡೆಗಣಿಸುತ್ತಾರೆ ಎಂದು ದೂರಿದರು.

ಸಂಗೊಳ್ಳಿ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದು ಕೊಟ್ಟದ್ದು ಇನಾಂದಾರ್ ಕುಟುಂಬ. ಸರ್ಕಾರ ಇನಾಂದಾರ್ ಕುಟುಂಬಕ್ಕೆ ಜಮೀನು ಕೊಟ್ಟಿದೆ‌ ಆದರೆ ಸಂಗೊಳ್ಳಿ ರಾಯಣ್ಣ ಕುಟುಂಬಕ್ಕೆ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ದುರಸ್ಥಿಗಾಗಿ ರೈತರಿಂದ ಪ್ರತಿಭಟನೆ