Select Your Language

Notifications

webdunia
webdunia
webdunia
webdunia

ಲೋಕಸಭೆಗೆ ಸ್ಪರ್ಧೆ ಮಾಡಲ್ಲ, ಮಂಡ್ಯ ಬಿಟ್ಟು ಹೋಗಲ್ಲ: ಸುಮಲತಾ ನಿರ್ಧಾರ ಪ್ರಕಟ

Sumalatha

Krishnaveni K

ಮಂಡ್ಯ , ಬುಧವಾರ, 3 ಏಪ್ರಿಲ್ 2024 (13:15 IST)
Photo Courtesy: Twitter
ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದಿಂದ ಸುಮಲತಾ ಹಿಂದೆ ಸರಿದಿದ್ದಾರೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಅಷ್ಟೇ ಅಲ್ಲದೆ, ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವುದಾಗಿ ಸುಮಲತಾ ಘೋಷಿಸಿದ್ದಾರೆ. ಇಂದು ಮಂಡ್ಯದಲ್ಲಿ ಬೆಂಬಲಿಗರ  ಜೊತೆ ಸಭೆ ನಡೆಸಿದ ಸುಮಲತಾ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಈ ವೇಳೆ ಸುದೀರ್ಘವಾಗಿ ಮಾತನಾಡಿದ ಅವರು ಮಂಡ್ಯದಲ್ಲಿ ತಮ್ಮ ಕಾರ್ಯಸಾಧನೆ ಬಗ್ಗೆ ಭಾವುಕರಾಗಿ ಮಾತನಾಡಿದರು.

ಓರ್ವ ಒಬ್ಬಂಟಿ ಮಹಿಳೆಯಾಗಿ, ಪಕ್ಷೇತರ ಸಂಸದೆಯಾಗಿ ಮಂಡ್ಯಕ್ಕೆ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುಮಲತಾ ವಿವರಣೆ ನೀಡಿದರು. ಮಂಡ್ಯಕ್ಕೆ ಇಷ್ಟೊಂದು  ಕೊಡುಗೆ ನೀಡಿದ ಪ್ರಧಾನಿ ಮೋದಿ ಸರ್ಕಾರವನ್ನು ಬೆಂಬಲಿಸದೇ ಇರಲು ಹೇಗೆ ಸಾಧ್ಯ? ಇಡೀ ಭಾರತವೇ ನಮ್ಮತ್ತ ತಿರುಗುವಂತೆ ಮಾಡಿದ ಮೋದಿಯವರನ್ನು ನಾವು ಬೆಂಬಲಿಸಬೇಕು. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.

ಇನ್ನು, ಮಂಡ್ಯದ ಹೊರತಾಗಿ ನನಗೆ ಬೇರೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೀರಾ ಕೇಳಿದರು. ಆದರೆ ಮಂಡ್ಯ ಬಿಟ್ಟು ಬೇರೆ ಎಲ್ಲೂ ಹೋಗಲ್ಲ. ನಾನು ಸೋತರೂ, ಗೆದ್ದರೂ ಮಂಡ್ಯದಲ್ಲಿಯೇ ಇರುತ್ತೇನೆ. ಮುಂದೆಯೂ ಮಂಡ್ಯ ಜನರೊಂದಿಗೇ ಇರುತ್ತೇನೆ ಎಂದಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಮಪತ್ರ ಸಲ್ಲಿಕೆಗೆ ಮುನ್ನ ರಾಹುಲ್ ಗಾಂಧಿ ರೋಡ್ ಶೋ