Select Your Language

Notifications

webdunia
webdunia
webdunia
webdunia

ನೀತಿ ಸಂಹಿತೆ ಉಲ್ಲಂಘಿಸಿ ಸೀತಾರಾಮ ಕಲ್ಯಾಣ ಪ್ರದರ್ಶನ

ನೀತಿ ಸಂಹಿತೆ ಉಲ್ಲಂಘಿಸಿ ಸೀತಾರಾಮ ಕಲ್ಯಾಣ ಪ್ರದರ್ಶನ
ಮಂಡ್ಯ , ಸೋಮವಾರ, 11 ಮಾರ್ಚ್ 2019 (15:36 IST)
ಮಂಡ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗಿದೆ. ಚುನಾವಣೆ ದಿನಾಂಕ ಘೋಷಣೆ ಮಾಡಿದ ಮಾರನೇ ದಿನವೇ ಈ ಘಟನೆ ನಡೆದಿದೆ.

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸೀತಾರಾಮ ಕಲ್ಯಾಣ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ನಿಖಿಲ್ ಕುಮಾರಸ್ವಾಮಿ ನಾಯಕನಟನಾಗಿರೋ ಸಿನಿಮಾ ಪ್ರದರ್ಶನ ವಾಗುತ್ತಿದೆ. ನಿಖಿಲ್, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಈ ಹಿಂದೆ ಅಂಬರೀಶ್ ಚುನಾವಣೆಗೆ ನಿಂತಾಗ ನೀತಿ ಸಂಹಿತೆ ಜಾರಿಯಾದರೆ ಅಂಬಿ ನಟಿಸಿದ್ದ ಸಿನಿಮಾ ಬಿಡುಗಡೆ ಆಗಿದ್ದರೆ ಮಂಡ್ಯದಿಂದ ಎತ್ತಂಗಡಿ ಆಗುತ್ತಿತ್ತು. ಆದರೆ ನಿಖಿಲ್ ವಿಷಯದಲ್ಲಿ ಜಿಲ್ಲಾಡಳಿತ ಹಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಜನರು ದೂರುತ್ತಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಆನೆ ಬಲ ತುಂಬಿದ ಸೊಗಡು ಶಿವಣ್ಣ