Select Your Language

Notifications

webdunia
webdunia
webdunia
webdunia

ವೀರಶೈವ ಲಿಂಗಾಯತರಿಗೆ ಮಣೆ ಹಾಕುವತ್ತ ಸಿದ್ದರಾಮಯ್ಯ, ಅಮಿತ್ ಶಾ ಚಿತ್ತ

ವೀರಶೈವ ಲಿಂಗಾಯತರಿಗೆ ಮಣೆ ಹಾಕುವತ್ತ ಸಿದ್ದರಾಮಯ್ಯ, ಅಮಿತ್ ಶಾ ಚಿತ್ತ
ಬಾಗಲಕೋಟೆ , ಗುರುವಾರ, 29 ಮಾರ್ಚ್ 2018 (18:29 IST)
ಉತ್ತರ ಕನಾ೯ಟಕದ 4 ಜಿಲ್ಲೆಗಳಲ್ಲಿ ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಲು ಸಿಎಂ ಸಿದ್ದರಾಮಯ್ಯ ಚಿಂತನೆ ಬೆನ್ನಲ್ಲೆ ಅಮಿತ್ ಶಾ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿ ಚಾಣಕ್ಯನ ವಿಭಿನ್ನ ನಡೆ ಕೂತೂಹಲ ಮೂಡಿಸಿದ್ದು ವೀರಶೈವ ಲಿಂಗಾಯತ ಸ್ವಾಮೀಜಿಗಳು ಸೇರಿ ಕಾಂಗ್ರೆಸ್ ವಿರುದ್ದ ಸೆಡ್ಡು ಹೊಡೆದ ಸ್ಥಳಕ್ಕೆ ಭೇಟಿ ನೀಡಲು ಅಮಿತ್ ಶಾ ಮುಂದಾಗಿದ್ದಾರೆ.
 
100ಕ್ಕೂ ಅಧಿಕ ಲಿಂಗಾಯತ ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸಲಿರೋ ಅಮಿತ್ ಶಾ. ಬಾಗಲಕೋಟೆ ಜಿಲ್ಲೆಯ ಶಿವಯೋಗಿ ಮಂದಿರದಲ್ಲಿ ವೀರಶೈವ ಲಿಂಗಾಯತ ಸ್ವಾಮೀಜಿಗಳು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
 
ಎಪ್ರಿಲ್ 3ರಂದು ಬಾಗಲಕೋಟೆ ಜಿಲ್ಲೆಯ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಲಿರುವ ಅಮಿತ್ ಶಾ. ಸಂಗನಬಸವ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಕಾಶಿ ಶ್ರೀ ಸೇರಿದಂತೆ ಹಲವರು ಸಭೆ ಸೇರಿ  ಕಾಂಗ್ರೆಸ್ ವಿರುದ್ದ ಗುಡುಗಲು ಕಾರಣವಾಗಿದ್ದ ಶಿವಯೋಗಿ ಮಂದಿರದಲ್ಲಿಯೇ ಕಾಂಗ್ರೆಸ್ ವಿರುದ್ಧ ರಣತಂತ್ರ ಹೆಣೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ದಿನವೇ ನೀತಿ ಸಂಹಿತೆ ಉಲ್ಲಂಘಿಸಿದ ಸಿದ್ದರಾಮಯ್ಯ?