Select Your Language

Notifications

webdunia
webdunia
webdunia
webdunia

ಸಕ್ರೆಬೈಲು ಆನೆ ಬಿಡಾರಕ್ಕೆ ಶಿವರಾಜ್ ಕುಮಾರ್‌ ಕುಟುಂಬ ಭೇಟಿ: ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

ಸಕ್ರೆಬೈಲು ಆನೆ ಬಿಡಾರಕ್ಕೆ ಶಿವರಾಜ್ ಕುಮಾರ್‌ ಕುಟುಂಬ ಭೇಟಿ: ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

Sampriya

ಶಿವಮೊಗ್ಗ , ಭಾನುವಾರ, 14 ಏಪ್ರಿಲ್ 2024 (14:08 IST)
Photo Courtesy X
ಶಿವಮೊಗ್ಗ: ನಟ ಶಿವರಾಜ್ ಕುಮಾರ್‌ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್‌ ಅವರ ಕುಟುಂಬ ಚುನಾವಣೆ ಪ್ರಚಾರದ ನಡವೆಯೂ ಇಂದು ಕುಟುಂಬ ಸಮೇತರಾಗಿ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿ ಸಮಯ ಕಳೆದರು.

ಶಿವಮೊಗ್ಗ ಸಮೀಪದ ಸಕ್ರೆಬೈಲಿನ ಆನೆ ಬಿಡಾರಕ್ಕೆ ತೆರಳಿದ ಅವರು ಆನೆಗಳ ಜತೆ ಮಾವುತರಿಂದ ಮಾಹಿತಿ ಪಡೆದರು.

ಇನ್ನೂ ರಜೆ ಹಿನ್ನೆಲೆ ಆನೆ ಬಿಡಾರಕ್ಕೆ ಜನರ ಆಗಮನ ಜಾಸ್ತಿ ಇದ್ದು, ನಟ ಶಿವರಾಜ್ ಕುಮಾರ್‌ ಜತೆ ಪೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.  ಈ ವೇಳೆ ಸಚಿವ ಮಧು ಬಂಗಾರಪ್ಪ ಇದ್ದರು

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಬಿರುಸಿನ ‍ಪ್ರಚಾರದಲ್ಲಿ ತೊಡಗಿದ್ದಾರೆ.





Share this Story:

Follow Webdunia kannada

ಮುಂದಿನ ಸುದ್ದಿ

ಉದ್ವಿಗ್ನ ಪರಿಸ್ಥಿತಿ: ಭಾರತದಿಂದ ಇಸ್ರೇಲ್‌ಗೆ ವಿಮಾನ ಹಾರಾಟ ರದ್ಧು ಸಾಧ್ಯತೆ!