Select Your Language

Notifications

webdunia
webdunia
webdunia
webdunia

ಮೈತ್ರಿ ಪಕ್ಷಗಳಿಂದ ಹೇಸಿಗೆಯ ರಾಜಕೀಯ ಎಂದ ಶೆಟ್ಟರ್

ಮೈತ್ರಿ ಪಕ್ಷಗಳಿಂದ ಹೇಸಿಗೆಯ ರಾಜಕೀಯ ಎಂದ ಶೆಟ್ಟರ್
ಹುಬ್ಬಳ್ಳಿ , ಶನಿವಾರ, 3 ನವೆಂಬರ್ 2018 (18:22 IST)
ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೆಳೆದುಕೊಳ್ಳುವುದರಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ ಕೈಗಳಿವೆ. ಎರಡೂ  ಪಕ್ಷಗಳು ಸೇರಿಕೊಂಡು ಹೇಸಿಗೆ ಕೆಲಸ ಮಾಡಿವೆ ಎಂದು ಬಿಜೆಪಿ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ದೂರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಉಭಯ ಪಕ್ಷಗಳು ಮಾಡಿರುವ ಕೆಲಸ ಮುಂದಿನ ದಿನಗಳಲ್ಲಿ ಅವರಿಗೆ ತಿರುಗು ಬಾಣವಾಗಲಿದೆ ಎಂದರು.

ಈ ವಿಷಯದಲ್ಲಿ ಯೋಗೇಶ್ವರ ಅವರದು ಯಾವುದೇ ತಪ್ಪಿಲ್ಲ. ನಂಬಿಕೆ ಇಟ್ಟು ಕರೆದುಕೊಂಡು ಬಂದಿದ್ದ ವ್ಯಕ್ತಿ ಹೀಗೆ ನಂಬಿಕೆಗೆ ದ್ರೋಹ ಮಾಡುತ್ತಾರೆ ಎಂಬುದನ್ನು ಅವರು ಎಣಿಸಿರಲಿಲ್ಲ ಎಂದು ಶೆಟ್ಟರ್ ಹೇಳಿದರು.

ಯಾವುದೇ ರಾಜಕೀಯ ಪಕ್ಷವಾಗಲಿ ವ್ಯಕ್ತಿಯನ್ನ ನಂಬಿ ಚುನಾವಣೆ ಟಿಕೆಟ್ ಕೊಟ್ಟಿರುತ್ತದೆ. ಇದರಲ್ಲಿ ನಂಬಿಕೆ ಮತ್ತು ವಿಶ್ವಾಸದ ಪ್ರಶ್ನೆ ಇರುತ್ತದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮದವರನ್ನ ಕಂಡು ಕಾರು ಹತ್ತಿ ಹೋದ ಇ.ಕೃಷ್ಣಪ್ಪ