Select Your Language

Notifications

webdunia
webdunia
webdunia
webdunia

ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿಯಿಂದ ಬಿಜೆಪಿ ಬಗ್ಗೆ ಹೊಸ ಬಾಂಬ್!

ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿಯಿಂದ ಬಿಜೆಪಿ ಬಗ್ಗೆ ಹೊಸ ಬಾಂಬ್!
ಬಾಗಲಕೋಟೆ , ಗುರುವಾರ, 3 ಮೇ 2018 (10:24 IST)
ಬಾಗಲಕೋಟೆ: ಮೊಳಕಾಲ್ಮೂರು ಶಾಸಕ ಬಿಜೆಪಿಯಿಂದ ಉಚ್ಛಾಟಿತ ನಾಯಕ ಎಸ್ ತಿಪ್ಪೇಸ್ವಾಮಿ ಬಿಜೆಪಿ ಪಕ್ಷದ ಬಗ್ಗೆ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಬಾಗಲಕೋಟೆ ಜಿಲ್ಲಾಧ್ಯಕ್ಷ ಕೆಎಸ್ ನವೀನ್ ಕುಮಾರ್ ಗೆ 25 ಲಕ್ಷ ರೂ. ಗಳನ್ನು ಪರಿವರ್ತನಾ ರ್ಯಾಲಿಗೆಂದು ನೀಡಿದ್ದೆ. ಪಕ್ಷ ಸಂಘಟನೆಗಾಗಿ 4-5 ಕೋಟಿ ರೂ. ನೀಡಿದ್ದೆ ಎಂದು ತಿಪ್ಪೇಸ್ವಾಮಿ ಹೇಳಿದ್ದಾರೆ. ಆದರೆ ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿರುವ ನವೀನ್ ಕುಮಾರ್, ಅವರು 25 ಪೈಸೆ ಕೂಡಾ ಕೊಟ್ಟಿಲ್ಲ. ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

ಮೋದಿ, ಅಮಿತ್ ಶಾ ಯಾತ್ರೆಗೆ ಬಸ್ ಗಳನ್ನು ಕಳುಹಿಸಿದ್ದೆ. ಇಷ್ಟೆಲ್ಲಾ ಮಾಡಿಯೂ ನನ್ನನ್ನು ನಾಯಕನಾಗಿ ಬೆಳೆಯಬಹುದೆಂಬ ಭಯಕ್ಕೆ ಹೊರ ಹಾಕಿದರು ಎಂದು ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸವಾಲಿಗೆ ರಾಹುಲ್ ಗಾಂಧಿ ಇಂದು ಉತ್ತರಕೊಡುತ್ತಾರಾ?