Select Your Language

Notifications

webdunia
webdunia
webdunia
webdunia

ನಿರೀಕ್ಷಣಾ ಜಾಮೀನು ಕೋರಿ ರೌಡಿ ಶೀಟರ್ ನಾಗರಾಜ್ ಅರ್ಜಿ

ನಿರೀಕ್ಷಣಾ ಜಾಮೀನು ಕೋರಿ ರೌಡಿ ಶೀಟರ್ ನಾಗರಾಜ್ ಅರ್ಜಿ
ಬೆಂಗಳೂರು , ಬುಧವಾರ, 19 ಏಪ್ರಿಲ್ 2017 (10:10 IST)
ಪೊಲೀಸರ ಕೈಗೆ ಸಿಗದಂತೆ ತಲೆಮರೆಸಿಕೊಂಡಿರುವ ರೌಡಿ ಶೀಟರ್ ನಾಗರಾಜ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾನೆ. ಬೆಂಗಳೂರಿನ 11ನೇ ಎಸಿಎಂಎಂ ಕೋರ್ಟ್`ಗೆ ನಾಗರಾಜ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ ನಡೆದಿರುವುದು ಶ್ರೀರಾಮಪುರದಲ್ಲಿ, ಹೆಣ್ಣೂರು ಪೊಲೀಸರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ. ನಾನು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಸಮಾಜ ವಿರೋಧಿ ಚಟುವಟಿಕೆ ನಡೆಸಿಲ್ಲ. ದೂರು ನೀಡಿದ ವ್ಯಕ್ತಿಯೇ ಯಾರೆಂದೂ ನನಗೆ ಗೊತ್ತಿಲ್ಲ. ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ  ಬಂಧಿತನಾಗಿರುವ ವ್ಯಕ್ತಿಯ ದೂರಿನನ್ವಯ ಈ ದಾಳಿ ನಡೆಸಲಾಗಿದೆ ಎಂದು ಅರ್ಜಿಯಲ್ಲಿ ನಾಗರಾಜ್ ವಾದಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ತಾನೆ, ಬೆಂಗಳೂರು ಪೊಲೀಸರು ಶ್ರೀರಾಂಪುರದ ನಾಗರಾಜ್ ಮನೆ ಮೇಲೆ ದಾಳಿ ನಡೆಸಿ 14.8 ಕೋಟಿ ರೂ. ನಷ್ಟು ಹಳೇನೋಟನ್ನ ವಶಪಡಿಸಿಕೊಂಡಿದ್ದರು. ಬಳಿಕ ತಲೆಮರೆಸಿಕೊಂಡಿರುವ ನಾಗರಾಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಂಟೆದೆಯ ಬಂಟ ಈ ವೀರ ಯೋಧನದ್ದು ಎಂಥಾ ಮಾತು ನೋಡಿ!