Select Your Language

Notifications

webdunia
webdunia
webdunia
webdunia

ಮರುಕಳಿಸಿದ ರೈತರ ಆತ್ಮಹತ್ಯೆ ಪ್ರಕರಣ

ಮರುಕಳಿಸಿದ ರೈತರ ಆತ್ಮಹತ್ಯೆ ಪ್ರಕರಣ
ಕೆ.ಆರ್.ನಗರ , ಶುಕ್ರವಾರ, 21 ಡಿಸೆಂಬರ್ 2018 (14:17 IST)
ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದ ಹೊರತಾಗಿಯೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ. ಸಾಲಬಾಧೆ ತಾಳಲಾರದೇ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಡಿ.ಎಸ್.ರಾಮಚಂದ್ರ(50) ಆತ್ಮಹತ್ಯೆಗೆ ಶರಣಾದ ರೈತನಾಗಿದ್ದಾನೆ.

ವಿವಿಧ ಮೈಕ್ರೋ ಪೈನಾಸ್ಸ್ ಕಂಪನಿ ಮತ್ತು ಖಾಸಗಿಯಾಗಿ 6 ಲಕ್ಷದವರೆಗೆ ಕೈಸಾಲ ಮಾಡಿಕೊಂಡಿದ್ದ ರೈತ
ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಬೆಳೆಗಳು ನಷ್ಟವಾದ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಲೇಕೊಪ್ಪಲು ಗ್ರಾಮದ ಬಳಿ ಇರುವ ತಮ್ಮ ಜಮೀನಿನ ಬಳಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿವಾದದ ನಡುವೆಯೂ ಕೆಜಿಎಫ್ ಚಿತ್ರ ಅದ್ದೂರಿ ಬಿಡುಗಡೆ