Select Your Language

Notifications

webdunia
webdunia
webdunia
webdunia

‘ಕರ್ನಾಟಕದಲ್ಲಿಈ ಬಾರಿಯೂ ನಾವೇ ಗೆಲ್ಲೋದು’

‘ಕರ್ನಾಟಕದಲ್ಲಿಈ ಬಾರಿಯೂ ನಾವೇ ಗೆಲ್ಲೋದು’
ರಾಯಚೂರು , ಸೋಮವಾರ, 12 ಫೆಬ್ರವರಿ 2018 (11:27 IST)
ರಾಯಚೂರು: ರಾಯಚೂರಿನ ಗಂಜ್ ಸರ್ಕಲ್ ನಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಪ್ರಧಾನಿ ಮೋದಿ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಇದುವರೆಗೆ ತಮ್ಮ ಭರವಸೆ ಈಡೇರಿಸಿಲ್ಲ.ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಈ ಬಾರಿಯೂ ಕರ್ನಾಟಕದಲ್ಲಿ ನಾವೇ ಗೆಲ್ಲಲಿದ್ದೇವೆ. ಜನ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿದ್ದಾರೆ. ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿ ಜನರೇ ನಮ್ಮನ್ನು ಈ ಬಾರಿಯೂ ಗೆಲ್ಲಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರದ ಬಗ್ಗೆ ರಾಹುಲ್ ಗಾಂಧಿ ಎಡವಟ್ಟು!