Select Your Language

Notifications

webdunia
webdunia
webdunia
webdunia

ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಚಾಲಕನ ದರ್ಪ!

ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಚಾಲಕನ ದರ್ಪ!
ದಾವಣಗೆರೆ , ಶನಿವಾರ, 1 ಸೆಪ್ಟಂಬರ್ 2018 (17:57 IST)
ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲ್ಲಿಸಿ ಚಾಲಕನೊಬ್ಬ ದರ್ಪ ತೋರಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲ್ಲಿಸಿದ್ದನ್ನ ಸಾರಿಗೆ ಬಸ್ ಚಾಲಕ ಪ್ರಶ್ನಿಸಿದ್ದಕ್ಕೆ ಬಸ್ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಕೆಲ ಹೊತ್ತು ಬಸ್  ಸಂಚಾರ ಸ್ಥಗಿತಗೊಂಡಿತ್ತು. ಬಸ್ ಬಿಡುವ ವಿಚಾರವಾಗಿ ಈ ಜಗಳ ನಡೆದಿದ್ದು ಖಾಸಗಿ ಬಸ್ ಚಾಲಕ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ದರ್ಪ ಮೆರೆದಿದ್ದಾನೆ. ಇನ್ನೂ ಈ ವೇಳೆ ಸಾರಿಗೆ ಬಸ್ ಚಾಲಕನ ಮೇಲೆ ಹಲ್ಲೆಗೂ ಕೂಡ ಖಾಸಗಿ ಬಸ್ ಚಾಲಕ ಮುಂದಾಗಿದ್ದಾನೆ. ಚನ್ನಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರ ಜೊತೆ ಮಾತುಕತೆ ನಡೆಸಿ ಜಗಳ ಬಗೆ ಹರಿಸಿದ ನಂತರ ಬಸ್ ಸಂಚಾರ ಆರಂಭಗೊಂಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಸಮ್ಮುಖದಲ್ಲೆ ಟಿಕೆಟ್ ಗಾಗಿ ಕಿತ್ತಾಟ